Advertisement

BJP-JDS ನೋಡ್ತಾ ಇರಿ, ದೋಸ್ತಿ ಕಥೆ ಏನೇನ್‌ ಆಗುತ್ತೆ ಅಂಥ: ಪರಮೇಶ್ವರ್‌

08:49 PM Jul 31, 2024 | |

ಬಾಗಲಕೋಟೆ: ರಾಜಕೀಯ ದುರುದ್ದೇಶದಿಂದ ನಮ್ಮ ವಿರುದ್ಧ ಪಾದಯಾತ್ರೆ ಮಾಡಲು ಹೊರಟಿದ್ದ ಬಿಜೆಪಿ-ಜೆಡಿಎಸ್‌ ದೋಸ್ತಿಯಲ್ಲಿ ಮುಂದೆ ಏನೇನಾಗುತ್ತದೆ ಎಂಬುದು ರಾಜ್ಯದ ಜನರೇ ನೋಡಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದರು.

Advertisement

ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾದಯಾತ್ರೆ ಮಾಡುವ ನಿರ್ಧಾರದಲ್ಲಿ ಆರಂಭದಲ್ಲೇ ಒಡಕು ಮೂಡಿದೆ. ಹೀಗಾಗಿ ರಾಜಕೀಯ ದುರುದ್ದೇಶದ ಪಾದಯಾತ್ರೆ ನಡೆಯೋದು ಅನುಮಾನ. ದೋಸ್ತಿ ಪಕ್ಷಗಳಲ್ಲಿ ಏನೇನು ಆಗುತ್ತದೆ ಎಂಬುದು ನೋಡುತ್ತೀರಿ. ಈ ಹಿಂದೆಯೂ ಅವರು ದೋಸ್ತಿ ಮಾಡಿದ್ದರು. ಮುಂದೆ ಏನಾಯಿತು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದರು. ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next