Advertisement

Kambala ಆರಾಧನೆಯ ರೂಪ; ಕಟೀಲಿಗೆ ಭೇಟಿ ನೀಡಿ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ

01:33 AM Aug 23, 2024 | Team Udayavani |

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಭೇಟಿ ನೀಡಿದರು.

Advertisement

ಹರಿನಾರಾಯಣ ದಾಸ ಆಸ್ರಣ್ಣ ಅವರು ಈಶ್ವರಪ್ಪನವರಿಗೆ ದೇವರ ಶೇಷವಸ್ತ್ರ ಪ್ರಸಾದ ನೀಡಿದರು.

ಬಳಿಕ ಮಾತನಾಡಿದ ಈಶ್ವರಪ್ಪನವರು, ಈ ಬಾರಿ ಶಿವಮೊಗ್ಗದಲ್ಲಿ ಕಂಬಳ ನಡೆಸುತ್ತಿದ್ದೇವೆ. ಕಂಬಳ ತುಳುನಾಡಿನ ಜನಪದ ಕ್ರೀಡೆಯಾಗಿರುವುದು ಮಾತ್ರವಲ್ಲದೆ ಆರಾಧನೆ ರೂಪವನ್ನು ಪಡೆದುಕೊಂಡಿದೆ. ಇದನ್ನು ಶಿವಮೊಗ್ಗದ ಜನತೆಗೆ ಪರಿಚಯಿಸಲು ತುಂಬಾ ಸಂತೋಷವಾಗುತ್ತಿದ್ದು, ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಈಶ್ವರಪ್ಪನವರ ಪುತ್ರ, ಶಿವಮೊಗ್ಗ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕಾಂತೇಶ್‌ ಮಾತನಾಡಿ, ಕಂಬಳವನ್ನು ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದ್ದು, ಸುಮಾರು 15 ಎಕರೆ ಜಾಗವನ್ನು ಗುರುತಿಸಿದ್ದೇವೆ, ಪಾರ್ಕಿಂಗ್‌ಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಲೋಕೇಶ್‌ ಮುಚ್ಚಾರು ಕಲ್ಕುಡೆ ಹಾಗೂ ಸಮಿತಿ ಸದಸ್ಯರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next