Advertisement

ಹಂಪಿಯಲ್ಲಿ ಶ್ರಾದ್ಧ ಕೈಗೊಂಡ ವಿದೇಶಿ ಯುವತಿ

10:51 PM Dec 14, 2019 | Team Udayavani |

ಹೊಸಪೇಟೆ: ಅಗಲಿದ ತಾಯಿ ಆತ್ಮಕ್ಕೆ ಶಾಂತಿಕೋರಿ ದಕ್ಷಿಣ ಆಫ್ರಿಕಾ ಮೂಲದ ಯುವತಿಯೊಬ್ಬರು ಐತಿಹಾಸಿಕ ಹಂಪಿಯಲ್ಲಿ ಶನಿವಾರ ಹಿಂದೂ ಸಂಪ್ರದಾಯದಂತೆ ಶ್ರಾದ್ಧ ಕರ್ಮ ನೆರವೇರಿಸುವ ಮೂಲಕ ಪಿಂಡ ಪ್ರದಾನ ಮಾಡಿದರು. ತುಂಗಭದ್ರಾ ನದಿ ತೀರದಲ್ಲಿರುವ ಹಂಪಿ ವೈದಿಕ ಮಂಟಪದಲ್ಲಿ ಶ್ರಾದ್ಧ ಕಾರ್ಯಗಳನ್ನು ನೆರವೇರಿಸಿ, ಬಳಿಕ ನದಿಯಲ್ಲಿ ಪಿಂಡ ವಿಸರ್ಜನೆ ಮಾಡಿ ಅಗಲಿದ ತಾಯಿ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು.

Advertisement

ದಕ್ಷಿಣ ಆಫ್ರಿಕಾದಲ್ಲಿ ತಮ್ಮ ತಾಯಿ ಕಾಲಿಯಾ ಮೃತಪಟ್ಟಿದ್ದಾರೆ. ಅಲ್ಲಿ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಹಂಪಿಯಲ್ಲಿ ಪಿಂಡಪ್ರದಾನ ಮಾಡಿರುವೆ ಎಂದು ಹೆಸರು ಹೇಳಲು ಇಚ್ಛಿಸದ ಯುವತಿ ಉದಯವಾಣಿಗೆ ತಿಳಿಸಿದರು. ಹಂಪಿ ಕ್ಷೇತ್ರ ಪುರೋಹಿತ ಮೋಹನ ಚಿಕ್ಕಭಟ್‌ ಜೋಶಿ ಶ್ರಾದ್ಧ ಕಾರ್ಯ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next