Advertisement

ಸಹಕಾರಿ ಸಂಘದಲ್ಲಿ ವಂಚನೆ ಪ್ರಕರಣ: ಸೊಸೈಟಿಯಲ್ಲಿ ಶೋಧ ಕಾರ್ಯ

01:01 AM Dec 24, 2022 | Team Udayavani |

ಉಡುಪಿ: ಠೇವಣಿ ಸ್ವೀಕರಿಸಿ ಸಾರ್ವಜನಿಕರಿಗೆ ವಂಚಿಸಿದ ಆರೋಪ ಹೊಂದಿರುವ ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಗೆ ಶುಕ್ರವಾರ ಪೊಲೀಸರು ದಾಳಿ ನಡೆಸಿ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಬಿ.ವಿ. ಲಕ್ಷ್ಮೀನಾರಾಯಣ ವಿರುದ್ಧ ಹಲ ವಾರು ಮಂದಿ ದೂರು ನೀಡಿರುವ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶದಂತೆ ಪೊಲೀಸ್‌ ಇಲಾಖೆಯ ಸೆನ್‌ ವಿಭಾಗದ ಪೊಲೀಸರು ಸೊಸೈಟಿಯ ಬಾಗಿಲನ್ನು ತೆರೆದು ಅಲ್ಲಿರುವ ಕಚೇರಿಯ ಮೂಲ ದಾಖಲೆಗಳನ್ನು ಹಾಗೂ ಕಂಪ್ಯೂಟರ್‌ನಲ್ಲಿರುವ ಎಲ್ಲ ಮಾಹಿತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದುವರೆಗೆ ಹಲವರು ದೂರು ನೀಡಿದ್ದು, 70 ಲಕ್ಷ ರೂಪಾಯಿಯಷ್ಟು ವಂಚಿಸಿದ್ದಾಗಿ ತಿಳಿಸಲಾಗಿದೆ. ಇನ್ನೂ ಕೆಲವರು ದಾಖಲೆ ಸಹಿತ ಇನ್ನಷ್ಟೇ ದೂರು ನೀಡಬೇಕಿದೆ. ಅದಾದ ಬಳಿಕ ಸ್ಪಷ್ಟ ಚಿತ್ರಣ ದೊರಕಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next