Advertisement

ಸಾಧನೆಗಳನ್ನು ಮನೆಮನೆಗಳಿಗೂ ತಲುಪಿಸುವ ಅಭಿಯಾನ ಆರಂಭ

05:01 AM Jun 07, 2020 | Team Udayavani |

ಚಾಮರಾಜನಗರ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಸಾಧನೆಗಳನ್ನು ಮನೆಮನೆಗಳಿಗೂ ತಲುಪಿಸುವ ಅಭಿಯಾನ ಆರಂಭಿಸಲಾಗಿದೆ ಎಂದು ಗುಂಡ್ಲು  ಪೇಟೆ ಕ್ಷೇತ್ರದ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರಿನಂಜನಪುರದಿಂದ ಮನೆ ಮನೆಗೆ ಸಾಧನೆಯ ಕರಪತ್ರಗಳನ್ನು ಹಂಚುವ ಮೂಲಕ ಅಭಿಯಾನ ನಡೆಯುತ್ತಿದೆ. ಕರಪತ್ರದಲ್ಲಿ ಕೇಂದ್ರ ಈ  ಒಂದು ವರ್ಷದಲ್ಲಿ ಕೈಗೊಂಡ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ಮುದ್ರಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ್ದು, ಅಕ್ರಮ ವಲಸಿಗರಿಗೆ ತಡೆ, ರಾಮಮಂದಿರ ನಿರ್ಮಾಣ ಆರಂಭ,

ಆಯು ಷ್ಮಾನ್‌ ಭಾರತ, ಅಟಲ್‌ ಪೆನ್ಶನ್‌ ಯೋಜನೆ, ಪ್ರಧಾನಮಂತ್ರಿ ಕಿಸಾನ್‌ ಯೋಜನೆ, ಅಟಲ್‌ ಭೂಜಲ ಯೋಜನೆ, ಜನಧನ್‌ ಯೋಜನೆ ನಮ್ಮ ಸರ್ಕಾರದ ಉತ್ತಮ ಕಾರ್ಯಕ್ರಮಗಳಾಗಿವೆ. ಅಭಿಯಾನ ಜೂ.14ರವರೆಗೂ ನಡೆಯಲಿದೆ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಂದರ್‌,  ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಗುರುಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next