Advertisement

ಶಹಾಬಾದನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

09:05 AM Jan 09, 2019 | Team Udayavani |

ಶಹಾಬಾದ: ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಂಗಳವಾರ ವಿವಿಧ ಸಂಘಟನೆಗಳು ಕರೆ ನೀಡಿದ ಭಾರತ ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂತು.

Advertisement

ಶಾಲಾ-ಕಾಲೇಜುಗಳು, ಬ್ಯಾಂಕುಗಳು ಹಾಗೂ ಬಸ್‌ಗಳು ಬಂದ್‌ ಆಗಿದ್ದು ಬಿಟ್ಟರೆ, ನಗರದ ಅಂಗಡಿ-ಮುಂಗಟ್ಟುಗಳು, ಪೆಟ್ರೋಲ್‌ ಬಂಕ್‌, ಹೋಟೆಲ್‌ಗ‌ಳು ಯಥಾ ರೀತಿ ತೆರೆದುಕೊಂಡಿದ್ದವು. ಎನ್‌ಇಕೆಆರ್‌ಟಿಸಿ ನೌಕರರು ಪ್ರತಿಭಟನೆಗೆ ಸಾಥ್‌ ನೀಡಿದ್ದರಿಂದ ಬಸ್‌ಗಳು ಸಂಪೂರ್ಣ ಬಂದ್‌ ಆಗಿದ್ದವು.

ಸಾರಿಗೆ ಬಸ್‌ ರಸ್ತೆಗೆ ಇಳಿಯದಿರುವುದರಿಂದ ಪ್ರಯಾಣಿಕರಿಲ್ಲದೇ ಇಡೀ ನಗರವೇ ಬಣಗುಡುತ್ತಿತ್ತು. ಬಸ್‌ ನಿಲ್ದಾಣ ಭಣಗುಡುತ್ತಿತ್ತು. ಕೆಲವೆಡೆ ಖಾಸಗಿ ವಾನಗಳ ಓಡಾಟ ಕಂಡು ಬಂದಿತಾದರೂ, ಪ್ರಯಾಣಿಕರು ಮಾತ್ರ ಬಂದ್‌ನಿಂದ ಪರದಾಡುವಂತ ಪರಿಸ್ಥಿತಿ ಉಂಟಾಗಿತ್ತು.

ನಗರದಲ್ಲಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ ಹಾಗೂ ಎಐಸಿಟಿಯುಸಿ ಸಂಘಟನೆಗಳು ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕರೆ ನೀಡಿದ ಭಾರತ್‌ ಬಂದ್‌ಗೆ ಬೆಂಬಲ ಸೂಚಿಸಿ ಬುಧವಾರ ಬೈಕ್‌ ರ್ಯಾಲಿ ಹಾಗೂ ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಸೋಮವಾರ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next