Advertisement

ಪುಣೆಯಿಂದ ಮಗನನ್ನು ಕರೆಯಲು ಹೋಗಿದ್ದ ಬೆಳಗಾವಿ ದಂಪತಿ ದುರ್ಮರಣ

08:13 AM May 11, 2020 | keerthan |

ಬೆಳಗಾವಿ: ಪುಣೆಯಿಂದ‌ ಕೊಲ್ಲಾಪುರಕ್ಕೆ ಮಗನನ್ನು ಕರೆದುಕೊಂಡು ಹೊರಟಿದ್ದ ಬೆಳಗಾವಿ ನಗರದ ನಾನಾವಾಡಿಯ ದಂಪತಿ ಮಹಾರಾಷ್ಟ್ರದ ಕರಾಡ ತಾಲೂಕಿನ ಉಂಬ್ರಜ್ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Advertisement

ನಾನಾವಾಡಿಯ ಅಮಿತ್ ಅಪ್ಪಾಜಿ ಗಾವಡೆ (38) ಹಾಗೂ ಡಾ. ಅನುಜಾ ಅಮೀತ್ ಗಾವಡೆ (35) ಅಸುನೀಗಿದ್ದಾರೆ. ಲಾಕ್ ಡೌನ್ ದಿಂದಾಗಿ ಪುಣೆಯಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದ‌ ಮಗನನ್ನು ಕರೆದುಕೊಂಡು ಬರಲು ಈ ದಂಪತಿ ವ್ಯಾಗನಾರ್‌ ಕಾರ್ ನಲ್ಲಿ ಹೊರಟಿದ್ದರು.

ಆದರೆ ಕರಾಡ ತಾಲೂಕಿನ ಉಂಬ್ರಜ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಕಾರ್ ನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ. ಚಾಲಕ ಕಾರಿನಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದನು. ಕಟರ್ ಸಹಾಯದಿಂದ ಬಾಗಿಲು ಮುರಿದು ಆತನನ್ನು ಹೊರಗೆ ತೆಗೆದು ರಕ್ಷಿಸಲಾಗಿದೆ.

ದಂಪತಿಯ ಮೃತದೇಹವನ್ನು ಶನಿವಾರ ಬೆಳಗಾವಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next