Advertisement

ಕನ್ನಡ ಕಾಯಕ ವರ್ಷಕ್ಕೆ 19 ಅಂಶಗಳ ಸೂತ್ರ

04:04 PM Nov 30, 2020 | Suhan S |

ದಾವಣಗೆರೆ: ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ನೇಮಕಾತಿಯಲ್ಲಿ ಕಡ್ಡಾಯವಾಗಿಕನ್ನಡಿಗರನ್ನೇ ಒದಗಿಸುವಂತೆ ಮಾನವಸಂಪನ್ಮೂಲ ಸೇವೆ ಒದಗಿಸುವ ಸಂಸ್ಥೆಗಳಿಗೆ ಷರತ್ತುಗಳನ್ನು ವಿಧಿಸಿರುವ ರಾಜ್ಯ ಸರ್ಕಾರ,ಅನುಪಾಲನೆ ಮಾಡಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಎಲ್ಲ ಇಲಾಖಾ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದೆ.

Advertisement

ಪ್ರಸಕ್ತ ನ.1ರಿಂದ ಮುಂದಿನ ಅ.31ರವರೆಗೆ ಒಂದು ವರ್ಷದ ಕಾಲ “ಕನ್ನಡ ಕಾಯಕ ವರ್ಷ’ಆಚರಿಸುತ್ತಿರುವ ರಾಜ್ಯ ಸರ್ಕಾರ, ಕನ್ನಡಭಾಷೆ ಬಳಕೆ ಹಾಗೂ ಕನ್ನಡ ಭಾಷೆ ಉಳಿಸಲು ಕೈಗೊಂಡ 19 ಪ್ರಮುಖ ಅಂಶಗಳನ್ನೊಳಗೊಂಡ ಸುತ್ತೋಲೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹೊರಡಿಸಿದ್ದಾರೆ.

ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು, ಅರೆ ವೈದ್ಯಕೀಯ ಸಂಸ್ಥೆಗಳುರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ನೀಡುವ ಎಲ್ಲ ಸೇವೆ ಹಾಗೂ ದಾಖಲೆಗಳು ಕನ್ನಡದಲ್ಲಿಯೇ ಇರಬೇಕು. ಜಿಲ್ಲೆಗಳಲ್ಲಿರುವ ಪ್ರಮುಖ ರಸ್ತೆ,ವೃತ್ತ, ಉದ್ಯಾನವನಗಳಿಗೆ ನಾಡಿನ,ಜಿಲ್ಲೆಯ ಪ್ರಸಿದ್ಧ ಸಾಹಿತಿಗಳು, ಹಿರಿಯ ಹೋರಾಟಗಾರರು ಹಾಗೂ ಸಾಧಕರ ಹೆಸರಿಡಲು ಸರ್ಕಾರ ಸೂಚಿಸಿದೆ.

ಕನ್ನಡ ಉಳಿಸಿ ಬೆಳೆಸುವ ದೃಷ್ಟಿಯಿಂದ ಆಡಳಿತದ ಎಲ್ಲ ವಲಯಗಳಲ್ಲಿ ಕನ್ನಡಪರಆದೇಶಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು.ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಲು ಕಾರ್ಯಕ್ರಮ ರೂಪಿಸಬೇಕು. ಇಲಾಖೆಗಳು ರೂಪಿಸುವ ನೀತಿಗಳ ಕರಡುಗಳನ್ನು ಕನ್ನಡದಲ್ಲಿಯೇ ಸಿದ್ಧಪಡಿಸಬೇಕು. ಅನುಮೋದಿತ ಅಂತಿಮ ನೀತಿಗಳು ಸಹ ಕನ್ನಡದಲ್ಲೇ ಇರಬೇಕು. ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆಯ ಮೂಲಕ ಅರ್ಜಿದಾರರಿಗೆ, ಫಲಾನುಭವಿಗಳಿಗೆ, ಸಾರ್ವಜನಿಕರಿಗೆ ಕಳುಹಿಸುವ ಸಂದೇಶ, ಇಮೇಲ್‌ ಸೇರಿದಂತೆ ಇನ್ನಿತರೆ ಸ್ವೀಕೃತಿ ಸಂದೇಶಗಳು ಕನ್ನಡದಲ್ಲಿ ದೊರೆಯುವಂತೆ ಮಾಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಊರ ಹೆಸರು ಕನ್ನಡದಲ್ಲೇ ಇರಲಿ: ರಾಜ್ಯದಲ್ಲಿರುವ ಕೆಲ ನಗರ, ಪಟ್ಟಣಗಳ ಹೆಸರುಗಳನ್ನು ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದ್ದು, ಬದಲಾವಣೆ ಆಗಿರುವ ಹೆಸರುಗಳನ್ನೇ ಕಚೇರಿಯನಾಮಫಲಕ ಹಾಗೂ ಕಚೇರಿಯ ಪ್ರಕಟಣೆ ಮತ್ತು ಆದೇಶಗಳಲ್ಲಿ ಸೇರಿದಂತೆ ಎಲ್ಲೆಡೆಕಡ್ಡಾಯವಾಗಿ ಬಳಸಬೇಕು. ಉದಾಹರಣೆಗೆ ಬೆಂಗಳೂರನ್ನು “ಬೆಂಗಳೂರು’ ಎಂದು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಬಳಸಬೇಕು. ಸರ್ಕಾರದ ವತಿಯಿಂದ ಆಯೋಜಿಸುವದಸರಾ, ಹಂಪಿ, ಕದಂಬ, ಜಿಲ್ಲಾ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ರಸ್ತೆ ಮೆರವಣಿಗೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ಕಲಾವಿದರಿಗೆ ಆದ್ಯತೆ ನೀಡಬೇಕು.

Advertisement

ಸರ್ಕಾರಿ ಮುದ್ರಣಾಲಯ ಹಾಗೂ ಸರ್ಕಾರಿಇಲಾಖೆಗಳು ಮುದ್ರಿಸುವ ತಲೆಬರಹಗಳು, ನಮೂನೆಗಳು, ಪೂರಕ ಸಾಮಗ್ರಿಗಳು, ಪ್ರಕಟಣೆಗಳು, ಜಾಹೀರಾತುಗಳಲ್ಲಿ “ಕನ್ನಡ ಕಾಯಕ ವರ್ಷ’ ಹಾಗೂ ವರ್ಷಾಚರಣೆಯ ಲಾಂಛನ ಬಳಸಬೇಕು. ಸಮಗ್ರ ಕನ್ನಡ ಅನುಷ್ಠಾನ ಹಾಗೂ ಬಳಕೆ ಪ್ರೋತ್ಸಾಹಿಸಲು ಆಯಾ ಇಲಾಖೆಗಳು ಕನ್ನಡಕ್ಕೆ ಸಂಬಂಧಿಸಿದ ಮಹತ್ವದ ಮತ್ತು ವಿವಿಧ ವಿಷಯಗಳ ಪದಕೋಶಸಂಗ್ರಹ ಮಾಡಿ ಡಿಜಿಟಲ್‌ ಮಾದರಿಯಲ್ಲಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಪುಟದಲ್ಲಿ ಕನ್ನಡ ರಾರಾಜಿಸಲಿ: ರಾಜ್ಯ

ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳ ಜಾಲತಾಣಗಳು ಹಾಗೂ ಸಾಮಾಜಿಕ ತಾಣಗಳ ಪ್ರಧಾನ ಪುಟಗಳನ್ನು ಕನ್ನಡದಲ್ಲಿಯೇ

ರೂಪಿಸಬೇಕು. ಒಳಪುಟಗಳ ಮಾಹಿತಿಗಳೆಲ್ಲವೂ ಕನ್ನಡದಲ್ಲಿಯೇ ಇರಬೇಕು. ನಾಮಫಲಕ, ಹೆದ್ದಾರಿ ಫಲಕ, ರಸ್ತೆ ಮಾರ್ಗಸೂಚಿ ಹಾಗೂ ಮೈಲಿಗಲ್ಲುಗಳಲ್ಲಿ ಕಡ್ಡಾಯವಾಗಿ ಶುದ್ಧ ಕನ್ನಡವನ್ನು ಪ್ರಧಾನವಾಗಿ ಬಳಸಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಕ್ರಮ ವಹಿಸಬೇಕು. ಕಾನೂನು, ಶಾಸನಗಳು, ವಿಧೇಯಕಗಳು, ಸಚಿವ ಸಂಪುಟದ ಟಿಪ್ಪಣಿಗಳು, ಅಧಿಸೂಚನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಹೊರಡಿಸಬೇಕು. ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳು, ಪದಾರ್ಥಗಳಮೇಲೆ ಮಾಹಿತಿ, ವಿವರಗಳನ್ನು ಕನ್ನಡದಲ್ಲಿಯೇ ಮುದ್ರಿಸುವಂತೆ ಸೂಚಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ಕನ್ನಡ ಕಾಯಕ ವರ್ಷದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಿದ್ದಾರೆ.ಇದರ ಯಶಸ್ಸಿಗೆ ಎಲ್ಲರ ಸಹಭಾಗಿತ್ವ ಮುಖ್ಯವಾಗಿದೆ. ಇಲಾಖಾಧಿಕಾರಿಗಳು ಯಾವುದೇ ನೆಪ ಹೇಳದೆ ಶೇ.100ಅನುಷ್ಠಾನಗೊಳಿಸಬೇಕು.ಟಿ.ಎಸ್‌.ನಾಗಾಭರಣ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next