Advertisement

ಎರಡು ಗುಜರಿ ವ್ಯಾಪಾರ ಸಂಸ್ಥೆಗಳಿಂದ 83 ಕೋಟಿ ರೂ. ಜಿಎಸ್‌ಟಿ ವಂಚನೆ ಪತ್ತೆ

11:55 PM Jun 09, 2019 | Team Udayavani |

ಮಂಗಳೂರು: ಎರಡು ಗುಜರಿ ವ್ಯಾಪಾರಿ ಸಂಸ್ಥೆಗಳು 83 ಕೋಟಿ ರೂ.ಗಳಷ್ಟು ಸರಕು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಮಾಡಿದ ಪ್ರಕರಣವನ್ನು ಮಂಗಳೂರಿನ ಕೇಂದ್ರೀಯ ಜಿಎಸ್‌ಟಿ ಕಮಿಷನರೆಟ್‌ ಭೇದಿಸಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದೆ.

Advertisement

ಮಂಗಳೂರಿನ ಗುಜರಿ ವ್ಯಾಪಾರಿ ಮೆ| ತೌಹೀದ್‌ ಸ್ಕ್ರೇಪ್‌ ಡೀಲರ್‌ನ ಪಿ.ಕೆ.ಅಬ್ದುಲ್‌ ರಹೀಂ ಮತ್ತು ಮೆ|ಎಂ.ಕೆ. ಟ್ರೇಡರ್ಸ್ ಮಾಲೀಕ ಅಬ್ದುಲ್‌ ಖಾದರ್‌ ಕೂಳೂರು ಚಾಯಬ್ಬ ಬಂಧಿತರು. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇವರಿಬ್ಬರೂ 2018ರಿಂದ ನಕಲಿ ಬಿಲ್‌ ತಯಾರಿಸಿ, ಸರಕಾರಕ್ಕೆ ಜಿಎಸ್‌ಟಿ ಪಾವತಿಸದೆ ವಂಚನೆ ಎಸಗುತ್ತಿದ್ದರು. ಎರಡೂ ಸಂಸ್ಥೆಗಳು ಸುಮಾರು 15 ಕೋಟಿ ರೂ.ಮೊತ್ತದ ನಕಲಿ ಬಿಲ್‌ ಬಳಕೆ ಮಾಡಿದ್ದು, ಒಟ್ಟು 83 ಕೋಟಿ ರೂ.ಮೊತ್ತದ ಸರಕು ಇದರಲ್ಲಿ ಒಳಗೊಂಡಿದೆ ಎಂದು ಕೇಂದ್ರೀಯ ಜಿಎಸ್‌ಟಿ ಕಮಿಷನರ್‌ ಧರ್ಮಸಿಂಗ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಕಲಿ ವ್ಯವಹಾರ ನಡೆಯುತ್ತಿದ್ದುದು ಹೀಗೆ: ಮೆ| ತೌಹೀದ್‌ ಸ್ಕ್ರೇಪ್‌ ಡೀಲರ್‌ ಮತ್ತು ಮೆ| ಎಂ.ಕೆ. ಟ್ರೇಡರ್ ಸಂಸ್ಥೆಗಳು ಬೇರೆ, ಬೇರೆ ಸಂಸ್ಥೆಗಳಿಂದ ಸರಕು ಸಾಗಾಟಕ್ಕೆ ಸಂಬಂಧಿಸಿ ನಕಲಿ ಬಿಲ್‌ (ಇನ್‌ವಾಯ್ಸ) ತಯಾರಿಸಿ ಅದರ ಆಧಾರದಲ್ಲಿ ನಕಲಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪಡೆದು ಸರಕಾರಕ್ಕೆ ವಂಚಿಸುತ್ತಿದ್ದವು. ಇಲ್ಲಿ ನಿಜವಾಗಿಯೂ ಸರಕು ಸಾಗಾಟ ಆಗುತ್ತಿರಲಿಲ್ಲ.

ಈ ಸಂಸ್ಥೆಗಳ ಮಾಲೀಕರು ನೋಂದಣಿ ರಹಿತ ವ್ಯಾಪಾರಿಗಳಿಂದ ಖರೀದಿಸಿದ ಲೋಹದ ಗುಜರಿ ಸಾಮಗ್ರಿಗಳನ್ನು ಅಲ್ಯೂಮಿನಿಯಂ ಎಂಎಸ್‌ ಕಾಪರ್‌ ರಾಡ್ಸ್‌ ಇಂಗೊಟ್ಸ್‌ ಕಾಸ್ಟಿಂಗ್ಸ್‌ ಮತ್ತಿತರ ಸಾಮಗ್ರಿಗಳ ತಯಾರಿಕ ಸಂಸ್ಥೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಈ ನಕಲಿ ಐಟಿಸಿಗಳನ್ನು ಉಪಯೋಗಿಸುತ್ತಿದ್ದರು.

Advertisement

ಅಲ್ಲದೆ, ಅವರು ನಕಲಿ ಬಿಲ್‌ ಹೊಂದಿದವರಿಗೆ ನಕಲಿ ಐಟಿಸಿ ಕ್ರೆಡಿಟ್‌ ವರ್ಗಾವಣೆ ಮಾಡಲು ಕೂಡ ಈ ನಕಲಿ ಬಿಲ್‌ಗ‌ಳನ್ನು ಉಪಯೋಗಿಸುತಿದ್ದರು. ಆರೋಪಿಗಳು ನಕಲಿ ಬಿಲ್‌ ತಯಾರಿಸುವ ವ್ಯಕ್ತಿಗೆ ಶೇ.3ರಷ್ಟು ಕಮಿಷನ್‌ ಪಾವತಿ ಮಾಡುತ್ತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next