Advertisement

ರೈಲು ಅವಘಡ: ಮೀರತ್‌ನಲ್ಲಿ ಹಳಿ ತಪ್ಪಿದ ರಾಜ್ಯ ರಾಣಿ ಎಕ್ಸ್‌ಪ್ರೆಸ್‌

10:25 AM Apr 15, 2017 | Team Udayavani |

ಲಕ್ನೋ : ಮೀರತ್‌-ಲಕ್ನೋ ಎಕ್ಸ್‌ಪ್ರೆಸ್‌ ರೈಲು ಮುಂಡಾಪಾಂಡೆ -ರಾಮ್‌ಪುರ್‌ ನಡುವೆ ಹಳಿ ತಪ್ಪಿದ ಅವಘಡ ಶನಿವಾರ ಬೆಳಗ್ಗೆ 8.15 ರ ವೇಳೆಗೆ ಸಂಭವಿಸಿದೆ. ರೈಲಿನ 8 ಬೋಗಿಗಳು ಹಳಿ ತಪ್ಪಿ 15 ಮಂದಿ ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

Advertisement

ಅವಘಡದ ಕುರಿತು ರೈಲ್ವೇ ಸಚಿವ ಸುರೇಶ್‌ ಕುಮಾರ್‌ ಅವರು ಅಧಿಕಾರಿಗಳಿಂದ ವಿವರ ಕೇಳಿದ್ದು , ತನಿಖೆಗೆ ಆದೇಶಿಸಿದ್ದಾರೆ.

ವೈದ್ಯಕೀಯ ತಂಡಗಳು ಸ್ಥಳಕ್ಕಾಗಮಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದ್ದು ,ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

ಅದೃಷ್ಟವಷಾತ್‌ ಯಾರೊಬ್ಬರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next