Advertisement

Bihar ದೇಗುಲದಲ್ಲಿ ಕಾಲ್ತುಳಿತಕ್ಕೆ 7 ಸಾವು: ಮೃತರೆಲ್ಲ ಕನ್ವರೀಯರು?

01:15 AM Aug 13, 2024 | Team Udayavani |

ಜೆಹನಾಬಾದ್‌ (ಬಿಹಾರ): ಇಲ್ಲಿನ ಬಾಬಾ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ರವಿವಾರ ತಡರಾತ್ರಿ ನಡೆದ ಕಾಲ್ತುಳಿತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 6 ಮಂದಿ ಮಹಿಳೆಯರಾಗಿದ್ದು, ಎಲ್ಲರೂ ಕನ್ವರ್‌ಯಾತ್ರಿಗಳು ಎಂಬ ಶಂಕೆಯಿದೆ.

Advertisement

16 ಮಂದಿ ಗಾಯ ಗೊಂಡಿದ್ದಾರೆ. ಯಾತ್ರಿಗಳು ಹಾಗೂ ಹೂವಿನ ವ್ಯಾಪಾರಿಗಳ ನಡುವೆ ನಡೆದ ಜಗಳ ಈ ಕಾಲ್ತುಳಿತಕ್ಕೆ ದಾರಿ ಮಾಡಿಕೊಟ್ಟಿರಬಹುದು ಎನ್ನಲಾಗಿದೆ. ರವಿವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಯಾವ ಕಾರಣಕ್ಕೆ ಕಾಲು¤ಳಿತ ನಡೆಯಿತು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೃತಪಟ್ಟವರ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ದೇವಸ್ಥಾನ ಆಡಳಿತ ಮಂಡಳಿಯೂ ಪರಿಹಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next