Advertisement

ಏಳು ದಿನ, ಏಳು ಆಟ!

04:03 PM Aug 11, 2018 | Team Udayavani |

ಯಕ್ಷಪ್ರಿಯರಿಗೆ ಇಲ್ಲೊಂದು ಬಂಪರ್‌ ಸುದ್ದಿಯಿದೆ. ಸಿರಿಕಲಾ ಮೇಳ ಹಾಗೂ ಅತಿಥಿ ಕಲಾವಿದರಿಂದ, ಸಿರಿಕಲಾ ಯಕ್ಷ ಸಪ್ತಾಹ ನಡೆಯುತ್ತಿದ್ದು, ವಿವಿಧ ಬಡಾವಣೆಗಳಲ್ಲಿ ಏಳು ದಿನ, ಏಳು ಯಕ್ಷ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಆ.17ರ ಸಂಜೆ 6.30ಕ್ಕೆ “ಸುದರ್ಶನ ಗರ್ವಭಂಗ’ (ಹೊಟೇಲ್‌ ಅನ್ನಕುಟೀರ, ಕತ್ರಿಗುಪ್ಪೆ ಮುಖ್ಯರಸ್ತೆ) ಆ.18 ಸಂಜೆ 6ಕ್ಕೆ “ಜಯ ವಸುಂಧರ’ (ಮುಲ್ಕಿ ಸುಂದರ್‌ ರಾಮ್‌ ಶೆಟ್ಟಿ ಸಭಾಭವನ, ವಿಜಯ ಬ್ಯಾಂಕ್‌ ಲೇಔಟ್‌, ಬನ್ನೇರುಘಟ್ಟ ರಸ್ತೆ) ಆ. 19ರ ಸಂಜೆ 6ಕ್ಕೆ “ಭೀಷ್ಮ ವಿಜಯ’ (ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನ, ಕೆಪಿಟಲ್‌ಸ್ಕೂಲ್‌ ಹತ್ತಿರ, ಆರ್‌ಬಿಐ ಲೇಔಟ್‌) ಆ.20ರ ಸಂಜೆ 6ಕ್ಕೆ “ಮಾರುತಿ ಪ್ರತಾಪ’ (ಶ್ರೀ ಆದಿಚುಂಚನಗಿರಿ ಮಠ, ಜಯನಗರ) ಆ.21 ಸಂಜೆ 6ಕ್ಕೆ “ಮಣಿಪುರ ವೈಭವ’ (ಶ್ರೀ ಚೌಡೇಶ್ವರಿ ದೇವಸ್ಥಾನ, ಬೇಗೂರು) ಆ. 22ರ ಸಂಜೆ 6 “ರಾಜಾ ಯಯಾತಿ’ (ಉದಯಭಾನು ಕಲಾಸಂಘ, ಗವಿಪುರ) ಆ. 23 ಸಂಜೆ-4.30ಕ್ಕೆ “ಇಂದ್ರ ಕೀಲಕ’ (ನಯನ ಸಭಾಂಗಣ, ಜೆ.ಸಿ.ರಸ್ತೆ) ನಡೆಯಲಿವೆ.

Advertisement

ಯಾವಾಗ?: ಆಗಸ್ಟ್‌ 17-23 
ಹೆಚ್ಚಿನ ಮಾಹಿತಿಗೆ: 9341839075

Advertisement

Udayavani is now on Telegram. Click here to join our channel and stay updated with the latest news.

Next