Advertisement

62 ಸಾವಿರ ಸೋಂಕಿತರು ಗುಣಮುಖ

01:36 PM Jun 22, 2020 | Suhan S |

ಮುಂಬಯಿ, ಜೂ. 21: ರಾಜ್ಯದಲ್ಲಿ 55,651 ಮಂದಿ ಕೋವಿಡ್ ಸೋಂಕಿತರು ಸಕ್ರಿಯರಾಗಿದ್ದರೆ, ಇಲ್ಲಿಯ ತನಕ 62,773 ರೋಗಿಗಳು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರು ಹೇಳಿದ್ದಾರೆ.

Advertisement

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು ಕೋವಿಡ್ ಸಂತ್ರಸ್ತರ ಸಂಖ್ಯೆ 1,24,331 ತಲುಪಿದೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 50.49ರಷ್ಟಿದ್ದರೆ, ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ 4.74ರಷ್ಟಿದೆ ಎಂದಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 5,91,049 ಮಂದಿಯನ್ನು ಮನೆ ಹೊಂ ಕ್ವಾರಂಟೈನ್‌ ಮಾಡಲಾಗಿದೆ. 25,697 ಮಂದಿಯನ್ನು ಸಾಂಸ್ಥಿಕ ಸಂಪರ್ಕತಡೆಯಲ್ಲಿ ಇರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 3,827 ಹೊಸ ಪ್ರಕರಣಗಳು ಪತ್ತೆಯಾಗಿವೆ. 142 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ಪರಿಣಾಮವಾಗಿ, ರಾಜ್ಯದಲ್ಲಿ ಒಟ್ಟು ಸಾವುಗಳ ಸಂಖ್ಯೆ 5 ಸಾವಿರ 893 ಕ್ಕೆ ತಲುಪಿದೆ. ಸಾವನ್ನಪ್ಪಿದವರಲ್ಲಿ 89 ಪುರುಷರು ಮತ್ತು 53 ಮಹಿಳೆಯರು ಸೇರಿದ್ದಾರೆ. 142 ಮಂದಿ ಸಾವನ್ನಪ್ಪಿದವರ ಪೈಕಿ 74 ಮಂದಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗದ್ದಾರೆ. 57 ರೋಗಿಗಳು 40 ವರ್ಷದಿಂದ 59 ವರ್ಷದೊಳಗಿನವರು. 11 ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಮುಂಬಯಿಯಲ್ಲಿ 114, ಥಾಣೆಯಲ್ಲಿ 2, ನಾಸಿಕ್‌ನಲ್ಲಿ 3, ಧುಳೆಯಲ್ಲಿ 3, ಜಲ್ಗಾಂವ್‌ನಲ್ಲಿ 3, ಸೊಲ್ಲಾಪುರದಲ್ಲಿ 1 ಮತ್ತು ಔರಂಗಾಬಾದ್‌ನಲ್ಲಿ 8 ಸಾವುಗಳು ವರದಿಯಾಗಿವೆ.

ಪ್ರಸ್ತುತ, ರಾಜ್ಯದಲ್ಲಿ 60 ಸರಕಾರಿ ಮತ್ತು 43 ಖಾಸಗಿ ಪ್ರಯೋಗಾಲಯಗಳಿದ್ದು, ಒಟ್ಟು 103 ಪ್ರಯೋಗಾಲಯಗಳು ಸೋಂಕು ಪರೀಕ್ಷೆಗಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಕಳುಹಿಸಲಾದ 7,35,674 ಮಾದರಿಗಳಲ್ಲಿ 1,24,331 ಮಾದರಿಗಳು ಪಾಸಿಟಿವ್‌ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next