Advertisement

ಹೊಂಡಕ್ಕೆ ಬಿದ್ದ ಬಸ್‌: 6 ಸಾವು,33 ಮಂದಿಗೆ ಗಾಯ

09:42 AM Jun 26, 2019 | Team Udayavani |

ರಾಂಚಿ: ಜಾರ್ಖಂಡ್‌ನ‌ ಗರ್ವ್ಹಾದ ಅನ್ನಾರಾಜ್‌ ಎಂಬಲ್ಲಿ ಮಂಗಳವಾರ ಬೆಳಗ್ಗೆ ಬಸ್ಸೊಂದು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದ ಪರಿಣಾಮ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಗರ್ವಾದಿಂದ ಛತ್ತೀಸ್‌ಗಡದತ್ತ ತೆರಳುತ್ತಿದ್ದ ಬಸ್‌ ತಡೆಗೋಡೆಗೆ ಢಿಕ್ಕಿಯಾಗಿ ಹೊಂಡಕ್ಕೆ ಉರುಳಿದೆ.

ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next