Advertisement

6 ಕೋ.ರೂ. ತಿಮಿಂಗಲ ವಾಂತಿ ವಶ; ಇಬ್ಬರ ಬಂಧನ

12:23 AM Oct 24, 2021 | Team Udayavani |

ಮಡಿಕೇರಿ: ಮಾರುತಿ ವ್ಯಾನ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 6 ಕೋ.ರೂ. ಬೆಲೆಬಾಳುವ 6 ಕೆಜಿ ತಿಮಿಂಗಲ ವಾಂತಿ(ಅಂಬರ್‌ ಗ್ರೀಸ್‌) ಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಮಡಿಕೇರಿ ಮತ್ತು ಸೋಮವಾರಪೇಟೆ ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ದಳದ ಸಿಬಂದಿ ಮಾಲು ಸಹಿತ ಬಂಧಿಸಿದ್ದಾರೆ.

Advertisement

ಸೋಮವಾರಪೇಟೆಯ ಎಂ.ಯು.ಕರೀಂ ಬೇಗ್‌ ಮತ್ತು ಅಬ್ದುಲ್‌ ಶರೀಫ್ ಬಂಧಿತರು.

ಶನಿವಾರ ಆರೋಪಿಗಳು ಮಕ್ಕಂದೂರು ಮಾರ್ಗವಾಗಿ ಮಡಿಕೇರಿ ಕಡೆಗೆ ಮಾರುತಿ ವ್ಯಾನ್‌ನಲ್ಲಿ ತಿಮಿಂಗಿಲ ವಾಂತಿಯನ್ನು ಸಾಗಿಸುತ್ತಿದ್ದರು. ಮಾರಾಟ ಮಾಡುವ ಸಲುವಾಗಿ ಮಡಿಕೇರಿ ಕಡೆಗೆ ಸಾಗಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಎಡಪಂಥವಲ್ಲದ, ಬಲಪಂಥವಲ್ಲದ ಭಾವವೇ ಹಿಂದುತ್ವ: ದತ್ತಾತ್ರೇಯ ಹೊಸಬಾಳೆ

 


Advertisement
Advertisement

Udayavani is now on Telegram. Click here to join our channel and stay updated with the latest news.

Next