Advertisement

5 ನದಿ ಹುಟ್ಟುವ ಪಂಚಗಿರಿ ರಕ್ಷಿಸೋಣ ಬನ್ನಿ

02:42 PM Jan 14, 2017 | |

ದೊಡ್ಡಬಳ್ಳಾಪುರ: ಪಂಚನದಿಗಳ ಉಗಮ ಸ್ಥಾನವಾದ ಪಂಚಗಿರಿ ಶ್ರೇಣಿ, ಕಾಡು, ನದಿಗಳನ್ನು ಸಂರಕ್ಷಿಸೋಣ ಎಂಬ ಘೋಷಣೆಯೊಂದಿಗೆ ನಂದಿಬೆಟ್ಟದ ಸಾಲಿನ ಚನ್ನಗಿರಿವರೆಗೆ ಬೆಂಗಳೂರಿನ ನಾಗಾರ್ಜುನ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಸೈಕಲ್‌ ಜಾಥಾ ನಡೆಸಿ, ದಾರಿಯುದ್ದಕ್ಕೂ ಜಲ-ಜಾಗೃತಿ ಭಿತ್ತಿ ಫ‌ಲಕಗಳನ್ನು ಪ್ರದರ್ಶಿಸಿದರು. 

Advertisement

ಜಾಥಾದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಿಧಾನ ಸೌಧದ ಸ್ತಂಭಗಳಿಗೆ ಕಲ್ಲುಗಳನ್ನು ಕೊಟ್ಟ ಕೊಯಿರಾ ಬೆಟ್ಟ ಮತ್ತು ಅದರ ಸುತ್ತಲೂ ನಡೆಯುತ್ತಿರುವ ಅಕ್ರಮ ಮತ್ತು ಅವೈಜಾnನಿಕ ಗಣಿಗಾರಿಕೆಯಿಂದಾಗಿ ಸುತ್ತಲಿನ ಜನರ ಜೀವನ ನರಕವಾಗಿದೆ. ಈ ಅಕ್ರಮ ಚಟುವಟಿಕೆಗಳನ್ನು ಸರ್ಕಾರ ಈ ಕೂಡಲೇ ನಿಲ್ಲಿಸಲೇ ಬೇಕು.

ಪರಿಸರ ಪ್ರೇಮಿಗಳ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಹೇಳಿದರು. ಸೈಕಲ್‌ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ  ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ, ಪಂಚಗಿರಿ ಶ್ರೇಣಿಗಳಲ್ಲಿ ಅರ್ಕಾವತಿ ಉತ್ತರಪಿನಾಕಿನಿ, ದಕ್ಷಿಣ ಪಿನಾಕಿನಿ, ಚಿತ್ರಾವತಿ, ಪಾಪಾಗ್ನಿ ಐದು ನದಿಗಳ ಉಗಮ ಸ್ಥಾನವಾಗಿದೆ.

ಈ ಬೆಟ್ಟಗಳ ಮೂಲದಲ್ಲಿಯೇ ಅಕ್ರಮ ಮತ್ತು ಅವೈಜಾnನಿಕ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ಸರ್ಕಾರ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪಂಚಗಿರಿ ಭಾಗದಲ್ಲಿ ಅಲ್ಪ-ಸ್ವಲ್ಪ ಕಾಡು ಇನ್ನೂ ಇರುವುದರಿಂದಲೇ ನಾವು ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗುತ್ತಿದೆ.

ಕಾಡು, ಬೆಟ್ಟ, ನದಿ ಸಂರಕ್ಷಣೆ ಬರೀ ಇಲಾಖೆಗಳ ಜವಾಬ್ದಾರಿಯಷ್ಟೇ ಅಲ್ಲ ಅದು ನಮ್ಮ ಜವಾಬ್ದಾರಿಯೂ ಆಗಿದೆ, ಈ ಭಾಗದಲ್ಲಿ ಬೆಟ್ಟ-ಕಾಡು ಸಂರಕ್ಷಿತ ವಾಗಿರುವುದರಿಂದ ನವಿಲು, ಮೊಲ, ಕಾಡುಹಂದಿ ಸೇರಿದಂತೆ ಪ್ರಾಣಿ ಪಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಸಂತಸದ ವಿಷಯ.

Advertisement

ಯುವಜನರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು. ನಾಗಾರ್ಜುನ ಕಾಲೇಜಿನ ಉಪನ್ಯಾಸಕ ಪ್ರತಾಪ ಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ನಂದಿಬೆಟ್ಟ, ಚನ್ನಗಿರಿ ಹಾಗೂ ಬ್ರಹ್ಮಗಿರಿ ಬೆಟ್ಟಗಳ ನಡುವೆ ಸಂಚರಿಸುವ ಮೂಲಕ ಇಲ್ಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿ ಕೆಲವು ಕಡೆ ಅರಣ್ಯ ಒತ್ತುವರಿ ಮತ್ತು ಕೆರೆ ಕಾಲುವೆಗಳ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸೂಕ್ತ ರೀತಿಯಲ್ಲಿ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಬೇಕಾಗಿದೆ ಎಂದರು.

ಜೊತೆಗೆ ಇಡೀ ಬೆಟ್ಟಗಳಲ್ಲಿ ಯಥೇತ್ಛವಾಗಿರುವನೀಲಗಿರಿಯನ್ನು ತೆಗೆದು ವನ್ಯ ಪ್ರಾಣಿಗಳಿಗೆ ಆಹಾರ ನೀಡುವ ಸ್ಥಳೀಯ ಜಾತಿಯ ಮರಗಳ ಅರಣ್ಯೀಕರಣ ಮತ್ತು ವನ್ಯ ಜೀವಿಗಳಿಗೆ ನೀರು ಸಿಗಲು ಸಾಧ್ಯವಾಗುವಂತೆ ಜಲಸಂರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಲೇಜಿನ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.

ಯುವ ಸಂಚಲನ ಬಳಗದ ಚಿದಾನಂದಮೂರ್ತಿ ಮಾತನಾಡಿ, ನಂದಿಗಿರಿ ಶ್ರೇಣಿಯ ಚನ್ನಗಿರಿಬೆಟ್ಟದಲ್ಲಿ ಹಿಂದೆ ನಡೆಯುತ್ತಿದ್ದ ಅಕ್ರಮ  ಗಣಿಗಾರಿಕೆ ನಿಂತುಹೋಗಿ ಬೆಟ್ಟ ರಕ್ಷಣೆಯಾದ ಪರಿಣಾಮ ಕೇವಲ 10 ವರ್ಷಗಳಲ್ಲೇ ಚನ್ನಗಿರಿ ಬೆಟ್ಟದಲ್ಲಿ ಮಳೆಗಾಲದ ಸಮಯದಲ್ಲಿ ನಮಗೆ ಇಲ್ಲೆ ಮಲೆನಾಡಿನಂತಾ ಸೊಬಗನ್ನು ನೋಡಲು ಸಾಧ್ಯವಾಗಿದೆ.

ಇಲ್ಲಿಗೆ ಪ್ರಕೃತಿ ಪ್ರೇಮಿಗಳು ಬರುವುದರ ಜೊತೆಗೆ ಇಲ್ಲಿನ ಪರಿಸರ ಹಾಳು ಮಾಡುವ ಕುಡುಕರ ಹಾವಳಿಯು ಹೆಚ್ಚಾಗಿದೆ. ಇದಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಟ್ಟವನ್ನು ಉಳಿಸಬೇಕೆಂದರು. ಪರಿಸರ ಉಳಿಸುವ ಜವಾಬ್ದಾರಿ ಬರೀ ಯುವಜನರ ಮೇಲಿದೆ ಅಂತ ಮಾತನಾಡುವ ಹಿರಿಯರೇ ಪರಿಸರವನ್ನು ಹಾಳು ಮಾಡಿದ್ದಾರೆ.

ಹಾಗಾಗಿ ಇದರ ಉಳಿಸುವ ಜವಾಬ್ದಾರಿಯೂ ಅವರ ಮೇಲೆಯೂ ಇದೆ. ಈ ಬೆಟ್ಟ, ಕಾಡುಗಳು ಉಳಿಯದಿದ್ದರೆ ಇತ್ತೀಚೆಗೆ ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ವಾರಗಟ್ಟಲೇ ಶಾಲೆಗಳಿಗೆ ರಜಾ ಕೊಟ್ಟ ಹಾಗೇ ನಮ್ಮಲ್ಲೂ ಆಗುವ ಕಾಲ ದೂರವಿಲ್ಲ ಎಂದರು. ಅರ್ಕಾವತಿ ನದಿ ಪುನಶ್ಚೇತನ ಆಂದೋಲನದ ಕಾರ್ಯಕರ್ತರಾದ ಜಿ.ಮಂಜುನಾಥ, ಮಡಕುಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next