Advertisement

ಬಿಜೆಪಿ ಕಾರ್ಯಕರ್ತನ ಹತ್ಯೆ: 5 ಸಿಪಿಎಂ ಕಾರ್ಯಕರ್ತರಿಗೆ ಜೀವಾವಧಿ

07:35 PM Jun 25, 2018 | udayavani editorial |

ಕಣ್ಣೂರು : ಉತ್ತರ ಕೇರಳದ ರಾಜಕೀಯ ಸೂಕ್ಷ್ಮತೆಯ ಕಣ್ಣೂರು ಜಿಲ್ಲೆಯಲ್ಲಿ 2008ರಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕೊಂದ ಅಪರಾಧಕ್ಕಾಗಿ ಐವರು ಸಿಪಿಎಂ ಕಾರ್ಯಕರ್ತರಿಗೆ ತಲಶೇರಿಯ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 50,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. 

Advertisement

ಶಿಕ್ಷೆಗೆ ಗುರಿಯಾದವರೆಂದರೆ  ಕೆ ಶ್ರೀಜಿತ್‌ (39), ವಿ ಬಿನಯ್‌ (31),  ಕೆ ಪಿ ಮನಾಫ್ (42), ಪಿ ಪಿ ಸುನೀಲ್‌ ಕುಮಾರ್‌ (51) ಮತ್ತು ಸಿ ಕೆ ಮಸೂದ್‌ (34).

ಈ ಕೊಲೆ ಕೇಸಿನಲ್ಲಿ ಒಟ್ಟು ಎಂಟು ಮಂದಿ ಆರೋಪಿಗಳಿದ್ದರು. ಅವರ ಪೈಕಿ ಒಬ್ಟಾತ ವಿಚಾರಣೆ ನಡೆಯುತ್ತಿದ್ದಾಗ ಮೃತಪಟ್ಟಿದ್ದ; ಉಳಿದಿಬ್ಬರನ್ನು ನ್ಯಾಯಾಲಯ ಸಾಕ್ಷ್ಯಾಧಾರಾದ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು. 

2008ರ ಮಾರ್ಚ್‌ 5ರಂದು ಲಾರಿ ಕ್ಲೀನರ್‌, 23ರ ಹರೆಯದ ನಿಖೀಲ್‌ ಎಂಬಾತನನ್ನು ರಾಜಕೀಯ ದ್ವೇಷದಲ್ಲಿ, ವಾಹನದಿಂದ ಹೊರಗೆಳೆದು ಕೊಚ್ಚಿ ಕೊಲೆಗೈಯಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next