Advertisement
ಏಪ್ರಿಲ್ನಿಂದ ಕಾರ್ಡ್ ವಿತರಣೆ ಆರಂಭವಾಗಿದ್ದರೂ ಆರಂಭದಲ್ಲಿ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಮೇ 31ರಂದು ಯಶಸ್ವಿನಿ ಯೋಜನೆಯು ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಂಡ ಬಳಿಕ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಮುಂಜಾನೆಯಿಂದಲೇ ಜನ ಕಾರ್ಡ್ಗಾಗಿ ಸಾಲುಗಟ್ಟಿ ನಿಲ್ಲುವುದು ಕಂಡುಬರುತ್ತಿದೆ.
Related Articles
Advertisement
ಕಾರ್ಡ್ ಪಡೆಯಲು ಕಾಲಮಿತಿ ಇಲ್ಲ: ಆರೋಗ್ಯ ಕಾರ್ಡ್ ಪಡೆಯಲು ಸರ್ಕಾರ ಕಾಲಮಿತಿ ನಿಗದಿಪಡಿಸಿಲ್ಲ. ಅನಾರೋಗ್ಯಕ್ಕೆ ಒಳಗಾದಾಗ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದ್ದು, ಆಗ ಕಾರ್ಡ್ ತೆಗೆದುಕೊಳ್ಳಬಹುದು.
ಬಿಪಿಎಲ್ ಕಾರ್ಡ್ದಾರರಿಗೆ ಬಹುತೇಕ ಚಿಕಿತ್ಸೆ ಉಚಿತ. ಎಪಿಎಲ್ ಕಾರ್ಡ್ದಾರರು ಪಡೆಯುವ ಚಿಕಿತ್ಸೆಯಲ್ಲಿ ಶೇ.30ರಷ್ಟನ್ನು ಸರ್ಕಾರ ಭರಿಸಲಿದ್ದು, ಉಳಿದಿದ್ದನ್ನು ರೋಗಿಯೇ ಪಾವತಿಸಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಡ್ ವಿತರಣೆ ಜವಾಬ್ದಾರಿ ವಹಿಸಿಕೊಂಡಿದೆ.
ಕಾರ್ಡ್ ಪಡೆಯುವುದು ಹೇಗೆ?: ಆರೋಗ್ಯ ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಪಡಿತರ ಚೀಟಿ ಕಡ್ಡಾಯ. ಪಡಿತರ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕು. 10 ರೂ. ಪಾವತಿಸಿ ಅರ್ಜಿ ಪಡೆದು ಭರ್ತಿ ಮಾಡಬೇಕು. ದಾಖಲೆ ಪರಿಶೀಲಿಸಿ ಬೆರಳಚ್ಚು ಪಡೆದು ಕೆಲ ನಿಮಿಷದಲ್ಲೇ ಸ್ಥಳದಲ್ಲಿ ಕಾರ್ಡ್ ವಿತರಿಸುತ್ತಾರೆ. ಮೊದಲ ಕಾರ್ಡ್ಗೆ 10 ರೂ. ಕಾರ್ಡ್ ಕಳೆದರೆ 20 ರೂ. ಪಾವತಿಸಿ ಹೊಸ ಕಾರ್ಡ್ ಪಡೆಯಬಹುದು. ರಾಜ್ಯಾದ್ಯಂತ ಈವರೆಗೆ 2.55 ಲಕ್ಷ ಮಂದಿ ಕಾರ್ಡ್ ಪಡೆದಿದ್ದಾರೆ.
ಆರೋಗ್ಯ ಕಾರ್ಡ್ ಪಡೆಯಲು ಕಾಲಮಿತಿ ನಿಗದಿಪಡಿಸಿಲ್ಲ. ಅಲ್ಲದೆ ಚಿಕಿತ್ಸೆಗೆ ಈ ಕಾರ್ಡ್ ಕಡ್ಡಾಯವಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿದಾಗ ಅಲ್ಲಿಯೇ ಆರೋಗ್ಯ ಕಾರ್ಡ್ ಮಾಡಿಸಿ ಚಿಕಿತ್ಸೆ ನೀಡಲಾಗುವುದು. ಹಾಗಾಗಿ ಜನ ತಕ್ಷಣ ಕಾರ್ಡ್ ಪಡೆಯಲು ಧಾವಿಸುವ ಅಗತ್ಯವಿಲ್ಲ.-ಡಾ.ಬಿ.ಎಆರ್.ಮೋಹನ್, ಸ್ಥಾನೀಯ ವೈದ್ಯಾಧಿಕಾರಿ, ಕೆ.ಸಿ.ಜನರಲ್ ಆಸ್ಪತ್ರೆ ಮೂರು ಆಸ್ಪತ್ರೆಗಳ ಜತೆಗೆ ಇನ್ನಷ್ಟು ಕೇಂದ್ರಗಳಲ್ಲಿ ಕಾರ್ಡ್ ವಿತರಿಸುವಂತಾಗಬೇಕು. ಬೆಂಗಳೂರು ಒನ್, ವಾರ್ಡ್ ಕಚೇರಿ ಇತರೆಡೆ ವಿತರಿಸಿದರೆ ಅನುಕೂಲವಾಗಲಿದೆ.
-ರಜಿಯಾ ಬೇಗಂ, ಕಾರ್ಡ್ ಆಕಾಂಕ್ಷಿ