Advertisement

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

01:13 AM Apr 28, 2024 | Team Udayavani |

ಅಮರಾವತಿ: ಪ್ರಸಕ್ತ ಸಾಲಿನ ಲೋಕಸಭೆ ಚುನಾ ವಣೆಗಾಗಿ ಆಂಧಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಶಾಖಪಟ್ಟಣವನ್ನು ಕಾರ್ಯಕಾರಿ ರಾಜಧಾನಿಯನ್ನಾಗಿ ಮಾಡಲಾಗುವುದು ಎಂದು ಘೋಷಿಸಿದೆ. ಪಿಂಚಣಿ ಯೋಜನೆಯ ಮೊತ್ತವನ್ನು 2028ರ ಜನವರಿಯಿಂದ 3000 ರೂ.ಗಳಿಂದ 3250 ರೂ.ಗೆ, 2029ರ ಜನವರಿಯಿಂದ 3500 ರೂ.ಗಳಿಗೆ ಏರಿಕೆ ಮಾಡಲಾಗುತ್ತದೆ ಎಂದು ಸಿಎಂ ಜಗನ್ಮೋಹನ ರೆಡ್ಡಿ ಹೇಳಿದ್ದಾರೆ. ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುವ ಯೋಜನೆಯ ಪ್ರೋತ್ಸಾಹಕ ಧನವನ್ನು ವಾರ್ಷಿಕವಾಗಿ 15,000 ರೂ. ಇದ್ದದ್ದು 17,000 ರೂ.ಗೆ ಹೆಚ್ಚಿಸಲಾಗಿದೆ. ದಲಿತರಿಗೆ ವಿಶೇಷ ಪಂಚಾಯತ್‌ಗಳ ನಿರ್ಮಾಣ, ಗಿಗ್‌ ವರ್ಕರ್‌ಗಳಿಗೆ 5 ಲಕ್ಷ ರೂ. ವಿಮೆ ನೀಡುವುದಾಗಿಯೂ ಘೋಷಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next