ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಹಮದಾಬಾದ್ ಪ್ರಯಾಣ ಮಾಡಿದ ಹಿನ್ನಲೆ ಇರುವವರಲ್ಲಿ ಸೋಂಕು ಕಂಡು ಬರುತ್ತಿದೆ. ಇಂದು ಒಟ್ಟು 42 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 900 ದಾಟಿದೆ.
ಇಂದಿನ 42 ಪ್ರಕರಣಗಳಲ್ಲಿ 25 ಮಂದಿ ಅಹಮದಾಬಾದ್ ಪ್ರಯಾಣ ಹಿನ್ನಲೆ ಹೊಂದಿದವರಾಗಿದ್ದಾರೆ. ಆರು ಮಂದಿ ಮುಂಬೈ ಪ್ರಯಾಣ ಮಾಡಿದ ಹಿನ್ನಲೆ ಹೊಂದಿದವರಾಗಿದ್ದಾರೆ. ಈವರೆಗೆ ಸೋಂಕು ಭೀತಿ ಇರದ ಹಾಸನ, ಯಾದಗಿರಿಯಲ್ಲೂ ಸೋಂಕು ಕಂಡು ಬಂದಿದೆ.
ಬಾಗಲಕೋಟೆಯಲ್ಲಿ 14 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢವಾಗಿದೆ. ಅದರಲ್ಲಿ 13 ಮಂದಿ ಅಹಮದಾಬಾದ್ ಪ್ರಯಾಣ ಹಿನ್ನಲೆ ಇರುವವರು. ಧಾರವಾಡದಲ್ಲಿ ಒಂಬತ್ತು ಸೋಂಕು ಪ್ರಕರಣಗಳು ದೃಢವಾಗಿದೆ. ಇವರೆಲ್ಲರೂ ಅಹಮದಾಬಾದ್ ಪ್ರಯಾಣದ ಹಿನ್ನೆಲೆ ಹೊಂದಿದವರು.
ಹಾಸನದಲ್ಲಿ ಐವರಿಗೆ ಸೋಂಕು ಕಾಣಿಸಿಕೊಂಡಿದೆ. 4 ಮತ್ತು 7 ವರ್ಷದ ಪ್ರಾಯದ ಮಕ್ಕಳಿಗೂ ಸೋಂಕು ತಾಗಿದೆ. ಇವರಲ್ಲರೂ ಮುಂಬೈ ಪ್ರಯಾಣದ ಹಿನ್ನಲೆ ಹೊಂದಿರುವವರು.
Related Articles
ಬೆಂಗಳೂರು ನಗರದಲ್ಲಿ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣ ದೃಢವಾಗಿದೆ. ಮೂವರು ಮಹಿಳೆಯರಿಗೆ ಸೋಂಕು ತಾಗಿದ್ದು, ಮೂವರಿಗೂ ಸೋಂಕಿತ ಸಂಖ್ಯೆ 454ರ ಸಂಪರ್ಕದಿಂದ ಸೋಂಕು ತಾಗಿದೆ.
ಬೀದರ್ ನಲ್ಲಿ ಇಬ್ಬರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇಬರಿಬ್ಬರೂ ಇಲ್ಲಿನ ಕಂಟೈನ್ ಮೆಂಟ್ ಝೋನ್ ನ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಸೋಂಕು ಪ್ರಕರಣಗಳು ದೃಢವಾಗಿದೆ. ಇವರಿಬ್ಬರೂ ಸೋಂಕಿತ ಸಂಖ್ಯೆ 507ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಎರಡು ಕೋವಿಡ್-19 ಪ್ರಕರಣಗಳು ದೃಢವಾಗಿದೆ. 33 ವರ್ಷದ ಮಹಿಳೆ ಮತ್ತು 38 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದುಇವರಿಬ್ಬರೂ ಅಹಮದಾಬಾದ್ ಪ್ರಯಾಣದ ಹಿನ್ನಲೆ ಹೊಂದಿದರು .
ಬಳ್ಳಾರಿಯಲ್ಲಿ 30 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಮಂಡ್ಯ, ಕಲಬುರಗಿಯಲ್ಲೂ ತಲಾ ಒಂದು ಪ್ರಕರಣ ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು 904 ಪ್ರಕರಣಗಳು ದೃಢವಾಗಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನ ಕಾರಣದಿಂದ 31 ಜನರು ಸಾವನ್ನಪ್ಪಿದ್ದು, 426 ಜನರು ಗುಣಮುಖರಾಗಿದ್ದಾರೆ.