Advertisement

ಸೈಕ್ಲಿಂಗ್ ಗೆ ಮೊರೆಹೋದ ದೇಶದ 40ಕ್ಕೂ ಹೆಚ್ಚು ನಗರಗಳು..!

07:17 PM Jun 09, 2021 | Team Udayavani |

ನವ ದೆಹಲಿ : ದೇಶದಲ್ಲಿ ಸೈಕ್ಲಿಂಗ್ ಉತ್ತೇಜಿಸಲು 40 ಕ್ಕೂ ಹೆಚ್ಚು ನಗರಗಳು ಆಸಕ್ತಿಯನ್ನು ಹೊಂದಿವೆ ಎಂದು ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್‌ ಪೋರ್ಟೇಶನ್ ಆ್ಯಂಡ್ ಡೆವಲಪ್‌ ಮೆಂಟ್ ಪಾಲಿಸಿ (ಐಟಿಡಿಪಿ) ಹೇಳಿದೆ.

Advertisement

ಮಾರ್ಚ್ 2020 ರಿಂದ ಭಾರತದಲ್ಲಿ ಲಾಕ್‌ ಡೌನ್ ನಿರ್ಬಂಧಗಳಿದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಸೈಕ್ಲಿಂಗ್‌ ನಲ್ಲಿ ಉತ್ಸಾಹವನ್ನು ಹೆಚ್ಚಿಸಲು ಕಾರಣವಾಗಿದೆ. ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ್ದರಿಂದ, ಸೈಕ್ಲಿಂಗ್ ಕಡಿಮೆ ದೂರದ ಪ್ರಯಾಣಕ್ಕೆ ವೈಯಕ್ತಿಕ, ಕೋವಿಡ್-ಸುರಕ್ಷಿತ ಪರ್ಯಾಯವೆಂದು ಸಾಬೀತಾಗಿದೆ.

ಇದನ್ನೂ ಓದಿ : ಉನ್ನತ ಹುದ್ದೆಯಲ್ಲಿದ್ದರೂ ಬೇಸಾಯದಲ್ಲಿ ಸಕ್ರಿಯ: K.M.ನಟರಾಜ್ ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ

ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳು ನಿಂತಿದ್ದ ಕಾರಣ ನಗರ ಪ್ರದೇಶಗಳಲ್ಲಿ ಕೆಲವು ಉದ್ಯಮ ಕ್ಷೇತ್ರಗಳು ಕಾರ್ಯ ನಿರ್ವಹಿಸುತ್ತಿದ್ದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಸಾರ್ವಜನಿಕ ಸಾರಿಗೆಗಳಿಗೆ ಅವಲಂಬಿಸದೆ ಸೈಕ್ಲಿಂಗ್ ಮೂಲಕವೇ ಕಚೇರಿಗೆ ತಲುಪುತ್ತಿರುವುದನ್ನು ಕೂಡ ವರದಿ ತಿಳಿಸಿದೆ.

ದೇಶದಲ್ಲಿ ಲಾಕ್ ಡೌನ್ ಆದಾಗಿನಿಂದ ಈ ಸೈಕ್ಲಿಂಗ್ ಕ್ರಾಂತಿ ವಾಯುಮಾಲಿನ್ಯ ನಿಯಂತ್ರಣಕ್ಕೂ ಕೂಡ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದು, ದೇಶದಾದ್ಯಂತ ಅಂದಾಜು, 60,000 ಮಂದಿ ಸೈಕ್ಲಿಂಗ್ ಮಾಡುವುರನ್ನು ಸೈಕ್ಲಿಂಗ್ ನನ್ನು ಅತ್ಯಂತ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

Advertisement

ಪೋಸ್ಟ್‌ ಮ್ಯಾನ್‌ ಗಳು, ಮಹಿಳೆಯರು, ಮಕ್ಕಳು ಇತರರನ್ನು ಒಳಗೊಂಡು ಭಾರತೀಯ ನಗರಗಳನ್ನು ಸೈಕ್ಲಿಂಗ್ ಸ್ನೇಹಿಯನ್ನಾಗಿ ಮಾಡುವ ಪ್ರಯತ್ನಗಳು ನಾಗರಿಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯೊಂದನ್ನು ಮಾಡಲಾಯಿತು. ಭಾರತದಾದ್ಯಂತ ಸುಮಾರು 60,000 ಜನರನ್ನು ಸಮೀಕ್ಷೆ ಮಾಡಲಾಗಿದೆ.

ನಾಸಿಕ್, ಬೆಂಗಳೂರು ಮತ್ತು ನ್ಯೂ ಟೌನ್ ಕೋಲ್ಕತಾ ಪ್ರದೇಶಗಳಲ್ಲಿ ಮಧ್ಯಮ ವಯಸ್ಸಿನ ಮಹಿಳೆಯರನ್ನೊಳಗೊಂಡು ಸೈಕ್ಲಿಂಗ್ ನನ್ನು ಒಪ್ಪಿಕೊಂಡಿದ್ದು, ಇದು ಸುಕ್ಷಿತ ಹಾಗೂ ಕಡಿಮೆ ವೆಚ್ಚದಾಯಕ ಎಂದು ಅಭೀಪ್ರಾಯ ಪಟ್ಟಿರುವುದಾಗಿ ಸಮೀಕ್ಷಾ ವರದಿ ತಿಳಿಸಿದೆ.

ಬಾರ್ಸಿಲೋನಾ ಮತ್ತು ಲಂಡನ್ ಗಳಲ್ಲಿ ಸೈಕ್ಲಿಂಗ್ ಗೆ ಉತ್ತೇಜನ :

ದೇಶದಲ್ಲಿ ಕೆಲವು ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಸೈಕಲ್ ಗಳನ್ನು ನೀಡುವುದರ ಮೂಲಕ ಕೋವಿಡ್ ನಿಯಂತ್ರಣದ ಕಾಳಜಿಯನ್ನು ವಹಿಸಿವೆ. ಮಾತ್ರವಲ್ಲದೇ, ಬಾರ್ಸಿಲೋನಾ ಮತ್ತು ಲಂಡನ್ ಗಳಲ್ಲಿ, ವಾಯು ಮಾಲಿನ್ಯವನ್ನು ತಡೆಟ್ಟುವ ಉದ್ದೇಶದಿಂದ ಹಾಗೂ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಣ ಮಾಡಲು ಸೈಕ್ಲಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ತಿಳಿಸಿದೆ.

ಕಡಿಮೆ ದೂರದ ಪ್ರಯಾಣಕ್ಕೆ ಸೈಕ್ಲಿಂಗ್ ಮಾಡುವುದರಿಂದ ಭಾರತೀಯ ಆರ್ಥಿಕತೆಗೆ ವಾರ್ಷಿಕ 1.8 ಟ್ರಿಲಿಯನ್ ಲಾಭವಾಗುತ್ತದೆ. ಮತ್ತು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ವಿಶ್ವಾಸಾರ್ಹ ಪರಿಹಾರವಾಗಿದೆ ಎಂದು ಸಹ ಸಮೀಕ್ಷೆ ವರದಿ ತಿಳಿಸಿದೆ.

ಇನ್ನು, 2020 ರಲ್ಲಿ, ಭಾರತದಲ್ಲಿ ಸೈಕಲ್ ಮಾರಾಟವು ಶೇಕಡಾ 20 ರಷ್ಟು ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ : ವಾಟ್ಸಾಪ್‌ ಗೆ ಟಕ್ಕರ್ ನೀಡಲಿದೆಯೇ ಭಾರತ ಸರ್ಕಾರದ ‘ಸಂದೇ‍ಶ್’

Advertisement

Udayavani is now on Telegram. Click here to join our channel and stay updated with the latest news.

Next