Advertisement

ಮತ್ತೊಂದು ದುರಂತ:ವಿಷಾಹಾರಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ 

08:55 AM Dec 21, 2018 | Team Udayavani |

ಚಿತ್ರದುರ್ಗ: ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಗಂಭೀರ ಸ್ವರೂಪದಲ್ಲಿ ಅಸ್ವಸ್ಥರಾಗಿರುವ ದುರಂತ ಹಿರಿಯೂರಿನ ಹುಲಿತೊಟ್ಲು ಗ್ರಾಮದಲ್ಲಿ  ಗುರುವಾರ ರಾತ್ರಿ ನಡೆದಿದೆ. 

Advertisement

ಒಂದೇ ಕುಟುಂಬದ 7 ಮಂದಿ ರಾಗಿ ಮುದ್ದೆ ಮತ್ತು ಅವರೆಕಾಳು ಸಾಂಬಾರು ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ನಾಲ್ವರು ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾರೆ. 

ಚಿತ್ತಪ್ಪ, ಶಶಿಧರ್‌ ,ಭಾಗ್ಯಮ್ಮ ಮತ್ತು ಶಶಿಧರ್‌ ಎನ್ನುವವರು ಮೃತಪಟ್ಟಿದ್ದು, ಮುತ್ತುರಾಜ್‌ (14), ಸದಾನಂದ (13)ಮತ್ತು ಅಜಯ್‌ ಗೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಚಿತ್ರದುರ್ಗದ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next