Advertisement

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

10:58 PM May 08, 2024 | Team Udayavani |

ನವದೆಹಲಿ: ಉತ್ತಮ ಉದ್ಯೋಗದ ಆಮಿಶವೊಡ್ಡಿ ಯುವಕರನ್ನು ರಷ್ಯಾಗೆ ಕರೆದೊಯ್ದು ಬಳಿಕ ಉಕ್ರೇನ್‌ ಯುದ್ಧದಲ್ಲಿ ಹೋರಾಡಲು ಬಳಸಿರುವ ಮಾನವ ಕಳ್ಳಸಾಗಣೆಯ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಸಿಬಿಐ ಬಂಧಿಸಿದೆ.

Advertisement

ಈ ಜಾಲದಿಂದ ಕನ್ನಡಿಗರೂ ಸೇರಿ 35 ಭಾರತೀಯರು ಮೋಸ ಹೋಗಿದ್ದಾರೆ ಎಂದು ಸಿಬಿಐ ಮಾರ್ಚ್‌ನಲ್ಲಿ ಹೇಳಿತ್ತು. ನಾಲ್ವರು ಬಂಧಿತರು ಅನುವಾದಕರಾಗಿದ್ದು, ಅದರಲ್ಲಿ ಒಬ್ಬ ವೀಸಾ ಕೊಡಿಸಲು ಹಾಗೂ ರಷ್ಯಾಗೆ ಟಿಕೆಟ್‌ಗಳನ್ನು ಮಾಡಿಸಿಕೊಡುವ ಜವಾಬ್ದಾರಿ ಹೊತ್ತಿದ್ದ. ಮತ್ತಿಬ್ಬರು ದಕ್ಷಿಣದ ಕೇರಳ ಮತ್ತು ತಮಿಳುನಾಡಿನಲ್ಲಿ “ಮುಖ್ಯ ನೇಮಕಾತಿದಾರ’ರಾಗಿದ್ದರು ಎಂದು ಸಿಬಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next