Advertisement

ಒಂದೇ ದಿನ 3,900 ಹೊಸ ಪ್ರಕರಣ

11:56 AM May 06, 2020 | Sriram |

ಹೊಸದಿಲ್ಲಿ/ ಬೆಂಗಳೂರು: ದೇಶದಲ್ಲಿ ಮಂಗಳವಾರ ಕೋವಿಡ್-19 ಪೀಡಿತರ ಸಂಖ್ಯೆ ದಿಢೀರ್‌ ಹೆಚ್ಚಳ ವಾಗಿದೆ. 24 ತಾಸುಗಳಲ್ಲಿ 3,900 ಮಂದಿಗೆ ಸೋಂಕು ದೃಢಪಟ್ಟಿದ್ದು, 195 ಮಂದಿ ಸಾವಿಗೀಡಾಗಿದ್ದಾರೆ.

Advertisement

ಈ ಆತಂಕಕಾರಿ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರ ಹಾಕಿದೆ. ಒಂದೇ ದಿನ ಇಷ್ಟೊಂದು ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು.ಕೆಲವು ರಾಜ್ಯಗಳು ಸಮಯಕ್ಕೆ ಸರಿಯಾಗಿ ಕೋವಿಡ್-19 ಪ್ರಕರಣಗಳ ಮಾಹಿತಿ ನೀಡುತ್ತಿಲ್ಲ. ನಿಗದಿತ ಸಮಯಕ್ಕೆ ಅಂಕಿಅಂಶಗಳನ್ನು ನೀಡಿದರಷ್ಟೇ ನಿರ್ವಹಣೆ ಸುಲಭವಾಗುತ್ತದೆ. ಈಗ ಕೆಲವು ರಾಜ್ಯಗಳು ಏಕಾಏಕಿ ಮಾಹಿತಿ ಕೊಟ್ಟ ಕಾರಣ ಒಂದೇ ದಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಸೋಂಕುಪೀಡಿತರು ಗುಣಮುಖ ರಾಗುವ ಪ್ರಮಾಣ ಶೇ.27.41ಕ್ಕೆ ಏರಿಕೆಯಾಗಿದೆ ಎಂದೂ ತಿಳಿಸಿದ್ದಾರೆ.

ಐದು ದಿನ; ಮೂರು ಬಲಿ
ಕರ್ನಾಟಕದಲ್ಲಿ ಕೋವಿಡ್-19 ಪೀಡಿತರ ಸಾವಿನ ಸರಣಿ ಮುಂದು ವರಿದಿದ್ದು, ಮಂಗಳವಾರ ದಾವಣಗೆರೆ ಮತ್ತು ವಿಜಯಪುರಗಳಲ್ಲಿ ತಲಾ ಒಬ್ಬ ಸೋಂಕುಪೀಡಿತ ಮಹಿಳೆ ಸಾವಿಗೀಡಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 29ಕ್ಕೆ ಏರಿದೆ. ಕಳೆದ ಐದು ದಿನಗಳಲ್ಲಿ ದಾವಣ ಗೆರೆಯಲ್ಲೇ ಮೂವರು ಸಾವನ್ನಪ್ಪಿದಂತಾಗಿದೆ. ಈ ಮಧ್ಯೆ ರಾಜ್ಯದ ವಿವಿಧೆಡೆ 22 ಮಂದಿಗೆ ಸೋಂಕು ತಗಲಿದ್ದು, ಒಟ್ಟಾರೆ ಸೋಂಕು ತಗಲಿದವರ ಸಂಖ್ಯೆ 673ಕ್ಕೆ ತಲುಪಿದೆ. ದಾವಣಗೆರೆ ಯಲ್ಲೇ ಮಂಗಳವಾರ ಮತ್ತೆ 12 ಮಂದಿಗೆ ಕೋವಿಡ್-19 ದೃಢವಾಗಿದೆ.

ದ.ಕ.: ಮತ್ತೂಬ್ಬರಿಗೆ ಸೋಂಕು
ಮಂಗಳೂರು: ನಗರದ ಬೋಳೂರಿನ ಮತ್ತೂಬ್ಬರಲ್ಲಿ ಕೋವಿಡ್-19 ದೃಢ ಪಟ್ಟಿದೆ. ಇದು ಜಿಲ್ಲೆಯಲ್ಲಿ 25ನೇ ಕೋವಿಡ್-19 ಪ್ರಕರಣ. ಈ ಹಿಂದೆ ಬೊಳೂರಿನ ದಂಪತಿಯಲ್ಲಿ ಕೋವಿಡ್-19 ದೃಢವಾಗಿದ್ದು, ಮಂಗಳವಾರ ಪಾಸಿಟಿವ್‌ ಬಂದಾತ ಈ ದಂಪತಿಯ ಅಳಿಯ. ಈ ಮನೆಯ ಇನ್ನೂ ಇಬ್ಬರ ಪರೀಕ್ಷಾ ವರದಿಗಾಗಿ ಕಾಯುಲಾಗುತ್ತಿದೆ.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಟ್ಟು 10 ಕೋವಿಡ್-19 ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಎಂಟು ಮಂದಿಯ ಸ್ಥಿತಿ ತೃಪ್ತಿಕರವಾಗಿದೆ. ಇಬ್ಬರು ರೋಗಿಗಳ ಸ್ಥಿತಿ ಸ್ವಲ್ಪ ಗಂಭೀರವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next