Advertisement

ಮನೆ-ಮನೆಗೂ ಬರಲಿದೆ ಗಂಗೆ

09:16 AM May 10, 2022 | Team Udayavani |

ಪುತ್ತೂರು: ಗ್ರಾಮೀಣ ಪ್ರದೇಶ ದಲ್ಲಿ ಕುಡಿಯವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಅನುಷ್ಠಾನಕ್ಕೆ ರೂಪಿಸಿರುವ 375 ಕೋ.ರೂ.ವೆಚ್ಚದ ಪ್ರಸ್ತಾವನೆಯು ಟೆಂಡರ್‌ ಹಂತಕ್ಕೆ ತಲುಪಿದ್ದು ಎಲ್ಲವು ಅಂದುಕೊಂಡಂತೆ ಸಾಗಿದರೆ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತೀ ಮನೆಗೂ ಗಂಗೆ ಹರಿದು ಬರಲಿದ್ದಾಳೆ.

Advertisement

ಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲು ರೂಪಿಸಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಕಾಮಗಾರಿ ಅನುಷ್ಠಾನಗೊಳ್ಳಲಿದ್ದು ಕರ್ನಾಟಕ ಜಲಮಂಡಳಿ ಇದರ ಜವಾಬ್ದಾರಿ ವಹಿಸಲಿದೆ. ಕೇಂದ್ರ ಸರಕಾರದ ಅನುದಾನದಲ್ಲಿ ಇದು ಕಾರ್ಯಗತಗೊಳ್ಳಲಿದೆ.

 ಏನಿದು ಯೋಜನೆ?

ನಗರದಲ್ಲಿ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಅನುಷ್ಠಾನದ ಹಂತದಲ್ಲಿ ಇರುವ ಜಲಸಿರಿ ಯೋಜನೆಯ ಮಾದರಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಮನೆಗೆ ಕುಡಿಯುವ ನೀರು ತಲುಪಬೇಕು ಎಂಬ ನಿಟ್ಟಿನಲ್ಲಿ ಶಾಸಕ ಸಂಜೀವ ಮಠಂದೂರು ಅವರು 375 ಕೋ.ರೂ. ಕ್ರಿಯಾ ಯೋಜನೆ ತಯಾರಿಸಿ ನೀರಾವರಿ ಇಲಾಖೆ ಮೂಲಕ ಯೋಜನೆ ಜಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕ್ರಿಯಾಯೋಜನೆ ಪ್ರಕಾರ ವಿಧಾನಸಭಾ ಕ್ಷೇತ್ರದ 31 ಗ್ರಾಮ ಪಂಚಾಯತ್‌, 1 ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರು ಒದಗಿಸುವ ಬೃಹತ್‌ ಯೋಜನೆ ಇದಾಗಿದೆ. ಯೋಜನೆಯ ಡಿಪಿಆರ್‌ಗೆ ಸರಕಾರ ಒಪ್ಪಿಗೆ ನೀಡಿದ್ದು ಟೆಂಡರ್‌ ಹಂತದಲ್ಲಿದೆ.

 ನೇತ್ರಾವತಿ ನದಿಯಿಂದ ನೀರು ಸಂಗ್ರಹಿಸಿ ಪೂರೈಕೆ

Advertisement

ಬಂಟ್ವಾಳ ತಾಲೂಕಿನಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಗೆ ಅಳ ವಡಿಸಿರುವ ಎಎಂಆರ್‌ ಡ್ಯಾಂ ನಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ನೀರು ಪೂರೈ ಸುವುದು ಈ ಯೋಜನೆಯ ಮೊದಲ ಹೆಜ್ಜೆ. ಜಾಕ್‌ವೆಲ್‌ನಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ವಿಟ್ಲ- ಅಳಿಕೆ ಮೂಲಕ ಪೈಪ್‌ ಲೈನ್‌ ಅಳವಡಿಸಿ ನೀರು ಹರಿಸ ಲಾಗು ತ್ತದೆ. ಪುಣಚ, ಬಲಾ°ಡಿನ ಎತ್ತರದ ಪ್ರದೇಶ ದಲ್ಲಿ 15 ಲಕ್ಷ ಲೀ. ಮಿಕ್ಕಿ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಿ ಅಲ್ಲಿಂದ ಪ್ರತೀ ಗ್ರಾ.ಪಂ.ಗೆ ಪೂರೈಸಲಾಗುತ್ತದೆ.

ನೀರಿನ ಕೊರತೆ ಉಂಟಾಗದು

ನಗರದಲ್ಲಿ ಜಲಸಿರಿ ಇರುವ ಹಾಗೆ ಗ್ರಾಮಾಂತರ ಪ್ರದೇಶದಲ್ಲಿ ಪ್ರತೀ ಮನೆಗೆ ನೀರು ಹರಿಸಲು 375 ಕೋ.ರೂ.ಪ್ರಸ್ತಾವನೆ ಟೆಂಡರ್‌ ಹಂತದಲ್ಲಿದೆ. ಡ್ಯಾಂ ಮೂಲಕ ನೀರು ಸಂಗ್ರಹಿಸಿ ಜೆಜೆಎಂ ಪೈಪ್‌ಲೈನ್‌ ಮೂಲಕ ಮನೆ ಮನೆಗೆ ನೀರು ಹರಿಸಲಾಗುತ್ತದೆ. ಇದು ಅನುಷ್ಠಾನ ಆದಾಗ ವಿಧಾನಸಭಾ ಕ್ಷೇತ್ರದ ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದು. -ಸಂಜೀವ ಮಠಂದೂರು, ಶಾಸಕರು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next