Advertisement

ಸ್ವರ್ಣವಲ್ಲೀ ಶ್ರೀಗಳ 32 ನೇ ಚಾತುರ್ಮಾಸ್ಯ ವ್ರತ ಆರಂಭ

03:53 PM Jul 13, 2022 | Team Udayavani |

ಶಿರಸಿ: ಹಸಿರು ಸ್ವಾಮೀಜಿ‌ ಎಂದೇ ಪ್ರಸಿದ್ಧರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾಸ್ವಾಮೀಜಿಗಳು ಆಷಾಢ ಪೂರ್ಣಿಮೆ ಬುಧವಾರ ದಂದು ಶಾಲ್ಮಲಾ ನದಿ ತೀರದ ಸ್ವರ್ಣವಲ್ಲೀಯಲ್ಲಿ 32 ನೇ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಿಸಿದರು.

Advertisement

ಶ್ರೀಮಠದಲ್ಲಿ ವಿರಾಜಮಾನವಾದ ಶ್ರೀವೇದವ್ಯಾಸರ ಅಧಿಷ್ಠಾನಕ್ಕೆ ಶ್ರೀಗಳವರು ಮಹಾಪೂಜೆಯನ್ನು ನೆರವೇರಿಸಿದರು. ಶ್ರೀಗಳವರು ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತ ಸಂಕಲ್ಪಿಸಿ ಶ್ರೀದೇವರ ವಿಶೇಷ ಪೂಜೆ ನಡೆಸಿದರು. ಸಮಸ್ತ ಶಿಷ್ಯ-ಭಕ್ತರ ಪರವಾಗಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ದಂಪತಿಗಳು ಶ್ರೀಗಳವರ ಪಾದಪೂಜೆ ನೆರವೇರಿಸಿದರು. ಬಳಿಕ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು.

ಜುಲೈ 9 ರಿಂದಲೇ ಈ ನಿಮಿತ್ತವಾಗಿ ಚತುರ್ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ, ಮಹಾಭಾರತ ಪಾರಾಯಣ ಆರಂಭವಾಗಿದ್ದು ಅದರ ಮಂಗಲೋತ್ಸವ ಕೂಡ ನಡೆಯಿತು.
ಚಾತುರ್ಮಾಸ್ಯವು ಜುಲೈ 13 ರಿಂದ ಸೆಪ್ಟೆಂಬರ್ 10 ವರೆಗೆ ನಡೆಯಲಿದ್ದು ಆ ದಿನಗಳಲ್ಲಿ ಪ್ರತಿದಿನ ಶ್ರೀ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಪ್ರತಿ ದಿನ ಸಾಯಂಕಾಲ ಮಹಾಭಾರತ ಪುರಾಣ ಪ್ರವಚನ ಸಂಯೋಜಿಸಲಾಗಿದೆ. ದಿನವೂ ಶಿಷ್ಯ-ಭಕ್ತರಿಂದ ಶ್ರೀ ಶ್ರೀಗಳವರ ಭಿಕ್ಷೆ-ಪಾದಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಗಾಯತ್ರಿಜಪ ಮುಂತಾದ ದಾರ್ಮಿಕ ಅನುಷ್ಠಾನಗಳು ಜರುಗಲಿವೆ.

ಸ್ವರ್ಣವಲ್ಲೀ ಶ್ರಿಗಳ ಜೊತೆ ತುರವೇಕೆರೆ ಶ್ರೀಪ್ರಣವಾನಂದತೀರ್ಥರೂ ಚಾತುರ್ಮಾಸ್ಯ ವೃತ ಸಂಕಲ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next