Advertisement

Kollur: ವಿಶೇಷ ಪೂಜೆ, ಖಾತೆ ಬದಲಾವಣೆ ವ್ಯಕ್ತಿಯಿಂದ 30 ಲಕ್ಷ ರೂ. ವಂಚನೆ- ದೂರು

12:57 AM Nov 03, 2023 | Team Udayavani |

ಕೊಲ್ಲೂರು: ಬೆಂಗಳೂರು ನಿವಾಸಿ ಕೊಲ್ಲೂರು ದೇವಿಯ ಭಕ್ತರ ಕುಟುಂಬಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಕೊಲ್ಲೂರು ನಿವಾಸಿ ಸುಧೀರ್‌ ಕುಮಾರ್‌ ಎಂಬಾತ 30.73 ಲಕ್ಷ ರೂ. ಹಣ ವಂಚಿಸಿದ್ದಾನೆ ಎಂದು ಕೊಲ್ಲೂರು ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಬೆಂಗಳೂರಿನ ದಿಲ್ನಾ ತನ್ನ ಗಂಡ ಮತ್ತು ಕುಟುಂಬ ಸದಸ್ಯರ ಜತೆ ಕೊಲ್ಲೂರು ದೇವಸ್ಥಾನಕ್ಕೆ ಬಂದ ವೇಳೆ ತನ್ನ ಅಣ್ಣ ದಿಲೀಶ್‌ ಅವರಿಗೆ ಪರಿಚಯವಿದ್ದ ಸುಧೀರ್‌ ಕುಮಾರ್‌ ಎಂಬಾತ ತಾನು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಕೇಳಿಕೊಂಡಿದ್ದ.

ಅಲ್ಲದೇ ದಿಲ್ನಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಕೂಡ ಮಾಡುವುದಾಗಿ ಹೇಳಿ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್‌ ಅವರಿಂದ ಒಟ್ಟು 30.73,600 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್‌ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದ ಕಾರಣ ದಿಲ್ನಾ ಅವರು ಸುಧೀರ್‌ ಕುಮಾರ್‌ ವಿರುದ್ಧ ಹಣ ವಂಚನೆ ಮಾಡಿರುವ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next