Advertisement

ಎಸಿ ಅನಿಲ ಸೋರಿಕೆ ; ಒಂದೇ ಕುಟುಂಬದ ಮೂವರ ದುರ್ಮರಣ 

11:36 AM Oct 03, 2018 | Team Udayavani |

ಚೆನ್ನೈ: ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸಿಯಿಂದ ಅನಿಲ ಸೋರಿಕೆಯಾಗಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಕೊಯಂಬೀಡುವಿನ ತಿರುವಳ್ಳುವರ್‌ ನಗರದಲ್ಲಿ  ಸೋಮವಾರ ರಾತ್ರಿ ನಡೆದಿದೆ. 

Advertisement

35 ವರ್ಷದ ವ್ಯಕ್ತಿ , ಪತ್ನಿ ಮತ್ತು 8 ವರ್ಷ ಪ್ರಾಯದ ಪುತ್ರ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಂಗಳವಾರ ಮಧ್ಯಾಹ್ನವಾದರೂ ಮನೆಯ ಬಾಗಿಲು ತೆಗೆಯದೆ ಇದ್ದ ಕಾರಣ ಅಕ್ಕಪಕ್ಕದ ನಿವಾಸಿಗಳು ಪರಿಶೀಲಿಸಿದಾಗ ಮೂವರು ಶವವಾಗಿದ್ದರು. 

ಇನ್‌ವಾರ್ಟರ್‌ ಮೂಲಕ ಎಸಿಗೆ ವಿದ್ಯುತ್‌ ಸರಬರಾಜು ಆಗುತ್ತಿದ್ದ ಕಾರಣ ದುರಂತ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next