Advertisement

ಥಾಣೆ: ಬಿಜೆಪಿ ಕಾರ್ಯಕರ್ತನ ಮೇಲೆ ಎಂಎನ್‌ಎಸ್‌ ಕಾರ್ಯಕರ್ತರಿಂದ ಹಲ್ಲೆ

09:03 AM Apr 10, 2019 | Team Udayavani |

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಹೊಡೆದು ಹಲ್ಲೆಗೈದ ಆರೋಪದ ಮೇಲೆ ಮೂವರು ಸ್ಥಳೀಯ ಎಂಎನ್‌ಎಸ್‌ ಕಾಯರಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಬಿಜೆಪಿ ಕಾರ್ಯಕರ್ತನು ವಾಟ್ಸಾಪ್‌ ನಲ್ಲಿ ಎಂಎನ್‌ಎಸ್‌ ನಾಯಕ ರಾಜ್‌ ಠಾಕ್ರೆ ವಿರುದ್ಧದ ಅನಪೇಕ್ಷಿತ ಪೋಸ್ಟ್‌ ಒಂದನ್ನು ಫಾರ್ವರ್ಡ್‌ ಮಾಡಿದ್ದುದೇ ಆತನ ಮೇಲಿನ ಹಲ್ಲೆಗೆ ಕಾರಣವೆಂದು ತಿಳಿಯಲಾಗಿದೆ.

ಹಲ್ಲೆ ಸಂತ್ರಸ್ತ ಬಿಜೆಪಿ ಕಾರ್ಯಕರ್ತ ಪ್ರದೀಪ್‌ ರಾಣೆ ತನ್ನ ಮೇಲಿನ ಹಲ್ಲೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next