Advertisement

ಎಸ್‌ಯುವಿ ವಾಹನ ಗಟಾರಕ್ಕೆ ಉರುಳಿ ಬಿದ್ದು ಮೂವರ ಸಾವು

12:14 PM May 09, 2017 | udayavani editorial |

ಬಂದಾ, ಉತ್ತರ ಪ್ರದೇಶ : ಇಲ್ಲಿನ ಕಳಿಂಜಾರ್‌ ಎಂಬಲ್ಲಿನ ಆನಂದಪುರ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎಸ್‌ಯುವಿ ವಾಹನವೊಂದು ಗಟಾರಕ್ಕೆ ಉರುಳಿ ಬಿದ್ದು ಮೂವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮೃತರನ್ನು ಉಮೇಶ್‌ ಚಂದ್ರ 40, ಅವರ ಪುತ್ರಿ ಆರಾಧ್ಯ 8 ಮತ್ತು ನಾದಿನಿ ರೇಖಾ 30 ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದರು. 

ಉಮೇಶ್‌, ಆರಾಧ್ಯ ಮತ್ತು ರೇಖಾ ಸ್ಥಳದಲ್ಲೇ ಮೃತಪಟ್ಟರು. ಗಾಯಾಳುಗಳನ್ನು ಒಡನೆಯೇ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next