Advertisement

ಕತಾರ್‌ನಲ್ಲಿ ಭಾರತೀಯ ಮೂಲದ ಮೂವರು ಸಮುದ್ರ ಪಾಲು

11:49 AM Oct 11, 2021 | Team Udayavani |

ದೋಹಾ : ಕತಾರ್‌ ನ ಮರೂನಾ ಬೀಚ್ ನಲ್ಲಿ ವಾರಾಂತ್ಯದ ವಿಹಾರಕ್ಕಾಗಿ ತೆರಳಿದ ಭಾರತೀಯ ಮೂಲದ ಮೂವರು ಸಮುದ್ರಪಾಲಾದ ದುರ್ಘಟನೆ ಶುಕ್ರವಾರ ನಡೆದಿದೆ.

Advertisement

ನೀರುಪಾಲಾದವರು ತಮಿಳುನಾಡು ಮೂಲದ ಬಾಲಾಜಿ ಬಲಗೂರು (38),ಪುತ್ರ ರಕ್ಷಣ್ (10),ನೆರೆಮನೆಯ ವರ್ಷಿಣಿ ವೈದ್ಯನಾಥನ್ (12) ಎಂದು ತಿಳಿದುಬಂದಿದೆ.

ಎರಡು ಕುಟುಂಬಗಳು ಒಟ್ಟಾಗಿ ಬೀಚ್ ಗೆ ವಿಹಾರಕ್ಕೆಂದು ತೆರಳಿದ ವೇಳೆ ಭಾರಿ ಅಲೆ ಅಪ್ಪಳಿಸಿ ಮೂವರು ನೀರುಪಾಲಾಗಿದ್ದಾರೆ ಎಂದು ಬಾಲಾಜಿ ಅವರ ಸಂಬಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಾಲಾಜಿ ಅವರು ಕುಂಭಕೋಣಂ ಜಿಲ್ಲೆಯವರಾಗಿದ್ದು, ಕೆಇಒ ಇಂಟರ್ನ್ಯಾಷನಲ್ ಕನ್ಸಲ್ಟೆಂಟ್ಸ್ ನಲ್ಲಿ ಹಿರಿಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವರ್ಷಿಣಿ ಅವರ ಕುಟುಂಬ ಚೆನ್ನೈ ಮೂಲದ್ದು ಎಂದು ತಿಳಿದು ಬಂದಿದೆ.

ಮೂವರ ಮೃತ ದೇಹಗಳನ್ನು ತರುವ ವ್ಯವಸ್ಥೆ ಮಾಡಲಾಗಿದ್ದು, ತಮಿಳುನಾಡಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next