Advertisement

Valmiki Corp scam: 2ನೇ ಹಂತದ ಪಾದಯಾತ್ರೆ ಶೀಘ್ರ ನಿರ್ಧಾರ: ಶ್ರೀರಾಮುಲು

12:02 AM Aug 03, 2024 | Team Udayavani |

ಕಂಪ್ಲಿ: ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ವಿರೋಧಿಸಿ ಎರಡನೇ ಹಂತದ ಪಾದಯಾತ್ರೆ ಕುರಿತು ಶೀಘ್ರವೇ ಹೈಕಮಾಂಡ್‌ ನಿರ್ಧರಿಸಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

Advertisement

ಪತ್ರಕರ್ತರೊಂದಿಗೆ ಅವರು ಮಾತನಾಡಿ, 2ನೇ ಹಂತದ ಪಾದಯಾತ್ರೆ ಬಳ್ಳಾರಿಯಿಂದ ಅಥವಾ ಕೂಡಲಸಂಗಮದಿಂದ ನಡೆಸುವ ಚಿಂತನೆಯಿದೆ. ಈ ಬಗ್ಗೆ ಪಕ್ಷ ಶೀಘ್ರವೇ ತೀರ್ಮಾನಿಸಲಿದೆ.

ಪೂರ್ವ ನಿರ್ಧಾರದಂತೆ ಆ. 3ರಿಂದ ಮುಡಾ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ವಿರೋಧಿಸಿ ಪಾದಯಾತ್ರೆ ನಡೆಯಲಿದೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಏನೇ ಹೇಳಿದರೂ ಈ ವಿಚಾರದಲ್ಲಿ ನಮ್ಮ ಪಕ್ಷದ ಅಧ್ಯಕ್ಷರ ತೀರ್ಮಾನವೇ ಅಂತಿಮ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next