Advertisement

Fraud: ಕಂಪೆನಿಗೆ 25 ಲಕ್ಷ ರೂ. ವಂಚನೆ; ದೂರು 

08:47 PM May 23, 2024 | Team Udayavani |

ಮಂಗಳೂರು: ಮೈಸೂರಿನಲ್ಲಿ ಶಾಖಾ ಕಚೇರಿ ಹೊಂದಿರುವ ಮಂಗಳೂರಿನ ಸಂಸ್ಥೆಯೊಂದಕ್ಕೆ ಅದರ ಉದ್ಯೋಗಿ 25 ಲಕ್ಷ ರೂ. ವಂಚನೆ ಮಾಡಿರುವುದಕ್ಕೆ ಸಂಬಂಧಿಸಿ ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸೋಮೇಶ್ವರ ನಿವಾಸಿ ಹರ್ಷಿತ್‌ (28) ಎಂಬಾತನನ್ನು ಸೇಲ್ಸ್‌ ಕಾರ್ಪೋರೇಷನ್‌ ಸಂಸ್ಥೆಯ ಮೈಸೂರಿನ ಕಚೇರಿಯಲ್ಲಿ ಮ್ಯಾನೇಜರ್‌ ಆಗಿ ನೇಮಕ ಮಾಡಲಾಗಿತ್ತು. ಅಲ್ಲಿನ ಎಲ್ಲ ವ್ಯವಹಾರಗಳನ್ನು ಆತನೇ ನೋಡಿಕೊಳ್ಳುತ್ತಿದ್ದ. ಆದರೆ ಇತ್ತೀಚೆಗೆ ಆತ ಕೆಲಕ್ಕೆ ಬರುವುದಿಲ್ಲ ಎಂದು ಹೇಳಿದ್ದು, ಕಂಪೆನಿಯ ಮಾಲಕರು ಕಚೇರಿಗೆ ಹೋಗಿ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಏರುಪೇರಾಗಿತ್ತು. ಆತ ಕಂಪೆನಿಯಿಂದ ಖರೀದಿ ಮಾಡಲಾದ ವಸ್ತುಗಳಿಗೆ ತನ್ನ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡಿರುವುದು ಕಂಡು ಬಂದಿದೆ.

ಸುಮಾರು 25 ಲಕ್ಷ ರೂ. ವಂಚನೆ ಮಾಡಿರುವುದು ತಿಳಿದು ಬಂದಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next