Advertisement

ದಾವಣಗೆರೆಯಲ್ಲಿ ಒಂದೇ ದಿನ 21 ಸೋಂಕು ಪ್ರಕರಣ ದೃಢ: ಜಿಲ್ಲಾಧಿಕಾರಿ ಮಾಹಿತಿ

08:19 AM May 04, 2020 | keerthan |

ದಾವಣಗೆರೆ: ಇಲ್ಲಿನ ಇಂದು ಒಂದೇ ದಿನ 21 ಜನರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಸುದ್ದಿಗೋಷ್ಢಿಯಲ್ಲಿ ತಿಳಿಸಿದರು

Advertisement

ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 94 ಜನರ ಗಂಟಲು ದೃವ ಮಾದರಿಯನ್ನು, ಶನಿವಾರ 72 ಜನರ ಗಂಟಲು ದ್ರವ ಮಾದರಿಯನ್ನು ಮತ್ತು ಇಂದು 164 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಶುಕ್ರವಾರ ಮತ್ತು ಶನಿವಾರದ ಎ ಕ್ಯಾಟಗರಿಯ ಸ್ಯಾಂಪಲ್ ಗಳ ವರದಿ ಬಂದಿದ್ದು, ಅದರಲ್ಲಿ 21 ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಹಂತದ ವರದಿ ಪ್ರಕಾರ 21ಪಾಸಿಟಿವ್ ಬಂದಿದೆ. ಖಚಿತವಾದ ನಂತರ ರೋಗಿಗಳ ಕೋಡ್ ನಂಬರ್ ನೀಡಲಾಗುವುದು ಮತ್ತು ಅವರ ಸಂಪರ್ಕದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದರು

ದಾವಣಗೆರೆ ಸಂಪೂರ್ಣ ಲಾಕ್ ಡೌನ್ ಆಗಲಿದೆ ಎಂದು ಸಭೆ ಬಳಿಕ ಸಂಸದ ಜಿ. ಎಂ. ಸಿದ್ದೇಶ್ವರ್ ಮಾಹಿತಿ ನೀಡಿದರು. ದಾವಣಗೆರೆಯಲ್ಲಿ ಯಾವುದೇ ಅಂಗಡಿ ತೆರೆಯುವಂತಿಲ್ಲ. ದಾವಣಗೆರೆ ರೆಡ್ ಜೋನ್ ಬರಲಿದೆ. 2 ಪಾಸಿಟಿವ್ ಬಂದಿರುವುದರಿಂದ ಕಂಟೈನ್ ಮೆಂಟ್ ಜೋನ್ ಆಗಲಿದೆ. ಕಂಟೈನ್ಮೆಂಟ್ ಝೋನ್ ನಲ್ಲಿ ದವಸ ಧಾನ್ಯ ಸಿಗುವುದಿಲ್ಲ, ಆನ್ ಲೈನ್ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next