Advertisement

ಬೆಳೆಗಳಿಗೆ ಕೀಟನಾಶಕ ಸಿಂಪಡಣೆ: ಮಹಾರಾಷ್ಟ್ರದಲ್ಲಿ 20 ರೈತರ ಸಾವು

06:30 AM Oct 09, 2017 | |

ಮುಂಬಯಿ: ಕಳೆದ ಒಂದು ತಿಂಗಳಲ್ಲಿ ಮಹಾರಾಷ್ಟ್ರದ ಯಾವತ್ಮಲ್‌ ಜಿಲ್ಲೆಯಲ್ಲಿ ಬೆಳೆಗಳಿಗೆ ಕೀಟನಾಶಕ ಸಿಂಪಡಣೆ ಮಾಡಿದ 20ಕ್ಕೂ ಹೆಚ್ಚು ರೈತ‌ರು ಸಾವನ್ನಪ್ಪಿದ್ದಾರೆ. ಸುಮಾರು 600 ರೈತರಿಗೆ ಕೀಟನಾಶಕ ಸಿಂಪಡಣೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ. ದೃಷ್ಟಿ ಸಮಸ್ಯೆ, ವಾಕರಿಕೆ, ಚರ್ಮದ ದದ್ದುಗಳು, ತಲೆನೋವು ಸಮಸ್ಯೆ ಕಾಣಿಸಿಕೊಂಡಿದೆ. ಸಿಂಪಡಣೆ ವೇಳೆ ರೈತರು ಯಾವುದೇ ಸುರಕ್ಷತಾ ಕವಚವನ್ನು ಧರಿಸಿರಲಿಲ್ಲ. ಹೊಸ ಸಿಂಪಡಣೆ ಯಂತ್ರ ಮತ್ತು ಕೇಂದ್ರ ಕೀಟನಾಶಕ ಮಂಡಳಿಯ ಹೊಸ ನಿಯಮವೇ ಇದಕ್ಕೆ ಕಾರಣ ಎಂದು ಪರಿಣತರು ಹೇಳಿದ್ದಾರೆ.

Advertisement

ಈ ಮಧ್ಯೆ ಪರಿಹಾರ ಕ್ರಮವಾಗಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಮಹಾರಾಷ್ಟ್ರ ಸರಕಾರ ಘೋಷಿಸಿದೆ. ಅಲ್ಲದೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಸುರಕ್ಷಾ ಕವಚಗಳನ್ನು ವಿತರಿಸದೇ ಕೀಟನಾಶಕಗಳನ್ನು ಮಾರಾಟ ಮಾಡಿದ ಐವರು ಕೃಷಿ ಸೇವಾ ಕೇಂದ್ರದ ಮಾಲಕರ ವಿರುದ್ಧ ದೂರು ದಾಖಲಿಸಲಾಗಿದೆ. ಇನ್ನೊಂದೆಡೆ ಈ ಸಂಬಂಧ ಬಾಂಬೆ ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಿ, ಸಂಬಂಧಿತ ಅಧಿಕಾರಿಗಳು ಮತ್ತು ಕೀಟನಾಶಕ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next