Advertisement

ರಾತ್ರಿಯಿಡೀ ಭಾರೀ ಕಾರ್ಯಾಚರಣೆ : ಕುಖ್ಯಾತ ಮರಗಳ್ಳರಿಬ್ಬರ ಬಂಧನ 

08:18 AM Jan 05, 2019 | |

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ  ಇಬ್ಬರು ಕುಖ್ಯಾತ ಮರಗಳ್ಳರನ್ನು ಬಂಧಿಸಿದ್ದಾರೆ.

Advertisement

ಬಂಧಿತರು ಸಿಯಾಜ್‌ ಮತ್ತು ಸಯ್ಯದ್‌ ಶೇಖ್‌ ಅಲಿ ಎನ್ನುವ ಅಪ್ಪ , ಮಗನಾಗಿದ್ದಾರೆ. 

ಇಬ್ಬರೂ ನಿರಂತರವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳ್ಳತನ ಮಾಡಿ ಪೊಲೀಸರ ನಿದ್ದೆ ಕೆಡಿಸಿದ್ದರು.ಮುಖ್ಯ ಕಾರ್ಯಾದರ್ಶಿ, ನ್ಯಾಯಾಧೀಶರ ಮನೆಯ ಬಳಿಯಲ್ಲಿಯೇ  ಕಳವು ಮಾಡುವಷ್ಟು ಖತರ್ನಾಕ್‌ಗಳಾಗಿದ್ದರು. 

ಶುಕ್ರವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ 200ಕ್ಕೂ ಹೆಚ್ಚು ಪೊಲೀಸರು ಇಬ್ಬರನ್ನು ಬೆಳಗಾಗುವುದರ ಒಳಗೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಇಬ್ಬರ ಬಳಿಯಿಂದ 35 ಲಕ್ಷ ರೂಪಾಯಿ ನಗದು  ಮತ್ತು ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. 

Advertisement

ಮನೆಗೆ ನುಗ್ಗಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಮಗ ಬೆಡ್‌ ಕೆಳಗೆ ಬಕೆಟ್‌ನಲ್ಲಿ ಬಚ್ಚಿಟ್ಟುಕೊಂಡಿದ್ದು ಪೊಲೀಸರು ಎಳೆ ತಂದಿದ್ದಾರೆ. 

ಇಬ್ಬರ ವಿರುದ್ಧ ಕಳೆದ ಕೆಲ ದಿನಗಳಿಂದ ಪೊಲೀಸರು ಬಲೆಗೆ ಬೀಸಿದ್ದರು. ಇಬ್ಬರು  ಮರಗಳ್ಳತನದ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಕಿಂಗ್‌ಪಿನ್‌ಗಳು ಎಂದು ಹೇಳಿದ್ದಾರೆ. 

ವೈಟ್‌ಫೀಲ್ಡ್‌ ಡಿಸಿಪಿ ಅಬ್‌ದುಲ್‌ ವಹಾಬ್‌ ಮತ್ತು ಡಿಸಿಪಿ ದೇವ್‌ರಾಜ್‌ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next