Advertisement

ಟಿ ಶರ್ಟ್‌, ಶಾರ್ಟ್ಸ್ ನಲ್ಲೇ ರೆಸಾರ್ಟ್‌ನಿಂದ ಇಬ್ಬರು ಶಾಸಕರು ಪರಾರಿ

11:44 AM Feb 14, 2017 | Team Udayavani |

ಚೆನ್ನೈ : ಘೋಷಿತ ಆದಾಯಕ್ಕಿಂತ ಅಧಿಕ ಪ್ರಮಾಣದ ಸಂಪತ್ತು ಹೊಂದಿರುವ ಕೇಸಿನಲ್ಲಿ ಇದೀಗ ಸುಪ್ರೀಂ ಕೋರ್ಟಿನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಗೂ ಮುಂದಿನ ಹತ್ತು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಂಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ವಿರುದ್ಧ ಈ ತೀರ್ಪು ಬರುವ ಮುನ್ನವೇ ಆಕೆಯಿಂದ ಚೆನ್ನೈ ಸಮೀಪದ ಐಷಾರಾಮಿ ರೆಸಾರ್ಟ್‌ ಒಂದರಲ್ಲಿ  ಕೂಡಿ ಹಾಕಲ್ಪಿಟ್ಟಿದ್ದ ಶಾಸಕರಲ್ಲಿ ಇಬ್ಬರು ಪನ್ನೀರಸೆಲ್ವಂ ತಂಡವನ್ನು ಸೇರಿಕೊಂಡಿದ್ದಾರೆ. 

Advertisement

ಪನ್ನಿರಸೆಲ್ವಂ ತಂಡವನ್ನು ಸೇರಿಕೊಂಡಿರು ಶಾಸಕರೆಂದರೆ ಎಸ್‌ ಸೆಮ್ಮಲೈ ಮತ್ತು ಎಸ್‌ ಎಸ್‌ ಶರವಣನ್‌. ಸೆಮ್ಮಲೈ ಅವರು ಇಂದು ಮಂಗಳವಾರ ಬೆಳಗ್ಗೆ ಪನ್ನೀರಸೆಲ್ವಂ ತಂಡವನ್ನು ಸೇರಿಕೊಂಡರೆ ಶರವಣನ್‌ ಅವರು ನಿನ್ನೆ ಸೋಮವಾರವೇ ಸೇರಿಕೊಂಡಿದ್ದರು. ಇವರನ್ನು ಇತರ ನೂರಕ್ಕೂ ಅಧಿಕ ಶಾಸಕರೊಂದಿಗೆ ಗೋಲ್ಡನ್‌ ಬೇ ರೆಸಾರ್ಟ್‌ನಲ್ಲಿ ಶಶಿಕಲಾ ಅವರು ಕೂಡಿ ಹಾಕಿದ್ದರು. 

ಕೂಡಿ ಹಾಕಲ್ಪಟ್ಟಿದ ಶಾಸಕರ ಮೇಲೆ ತೀವ್ರ ಕಣ್ಗಾವಲು ನಡೆಸುತ್ತಿದ್ದ ದಢೂತಿ ಗಾರ್ಡ್‌ಗಳ ಕಣ್ತಪ್ಪಿಸಿ ತಾನು ಕೇವಲ ಟಿ ಶರ್ಟ್‌ ಮತುತ ಬರ್ಮುಡಾ (ಶಾರ್ಟ್ಸ್)ನಲ್ಲಿ ಯಾರಿಗೂ ಗೊತ್ತಾಗದಂತೆ ವೇಷ ಮರೆಸಿಕೊಂಡು ರೆಸಾರ್ಟ್‌ನ ಎತ್ತರದ ಗೋಡೆಯನ್ನು ಹತ್ತಿ ಹಾರಿ ತಪ್ಪಿಸಿಕೊಂಡು ಬಂದಿರುವುದಾಗಿ ಶಾಸಕ ಸೆಮ್ಮಲಂ ಹೇಳಿದರು. 

ನಿನ್ನೆ ಸೋಮವಾರ ಬೆಳಗ್ಗೆ ಚೆನ್ನೈ ಪೊಲೀಸರು ಮದ್ರಾಸ್‌ ಹೈಕೋರ್ಟ್‌ಗೆ ಹೇಳಿಕೆ ನೀಡಿ, ಗೋಲ್ಡನ್‌ ಬೇ ರೆಸಾರ್ಟ್‌ನಲ್ಲಿ 119 ಮಂದಿ ಎಐಎಡಿಎಂಕೆ ಶಾಸಕರು ಇದ್ದಾರೆ ಹಾಗೂ ಅವರ್ಯಾರೂ ತಮ್ಮನ್ನು ಬಲವಂತವಾಗಿ ಇಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next