Advertisement

ಉತ್ತರ ಪ್ರದೇಶದಲ್ಲಿ 2 ಅಂಬೇಡ್ಕರ್‌ ಪ್ರತಿಮೆ ಧ್ವಂಸ; ಆಕ್ರೋಶ 

04:25 PM Mar 31, 2018 | Team Udayavani |

ಲಕ್ನೋ: ದೇಶದಲ್ಲಿ ಪ್ರತಿಮೆಗಳನ್ನು ಧ್ವಂಸಗೈಯುವ ದುಷ್ಕೃತ್ಯವನ್ನು ಕಿಡಿಗೇಡಿಗಳು ಮುಂದುವರಿಸಿದ್ದು , ಉತ್ತರಪ್ರದೇಶದಲ್ಲಿ 24 ಗಂಟೆಗಳ ಒಳಗೆ  ದಲಿತ ನಾಯಕ , ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 2 ಪ್ರತಿಮೆಗಳನ್ನು  ಧ್ವಂಸಗೈಯಲಾಗಿದೆ.

Advertisement

ಶುಕ್ರವಾರ ರಾತ್ರಿ ಸಿದ್ಧಾರ್ಥನಗರದ ಗೊಹಾನಿಯಾದಲ್ಲಿ ಪ್ರತಿಮೆ ಧ್ವಂಸಗೈಯಲಾಗಿದ್ದು, ಶನಿವಾರ ಬೆಳಗ್ಗೆ ಅಲಹಾಬಾದ್‌ನಲ್ಲಿ ಪ್ರತಿಮೆಗೆ ಹಾನಿ ಮಾಡಲಾಗಿದೆ. 

ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದು ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿವೆ.

ತ್ರಿಪುರಾದಲ್ಲಿ ಲೆನಿನ್‌ ಪ್ರತಿಮೆ ಸೇರಿದಂತೆ ದೇಶದ ವಿವಿಧೆಡೆ ಮಹಾತ್ಮ ಗಾಂಧೀಜಿ ಸೇರಿದಂತೆ ರಾಷ್ಟ್ರ ನಾಯಕರ ಪ್ರತಿಮೆಗಳನ್ನು ಕಿಡಿ ಗೇಡಿಗಳು ಹಾನಿ ಮಾಡಿದ್ದರು. ಈ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next