Advertisement

Bantwal ರಸ್ತೆಯಲ್ಲಿ ಬಿದ್ದುಸಿಕ್ಕಿದ 2.43 ಲಕ್ಷರೂ.ಮರಳಿಸಿ ಮದ್ರಸಾ ಅಧ್ಯಾಪಕನ ಪ್ರಾಮಾಣಿಕತೆ

12:52 AM May 30, 2024 | Team Udayavani |

ಬಂಟ್ವಾಳ: ಬಂಟ್ವಾಳ ಕೆಳಗಿನಪೇಟೆಯಲ್ಲಿ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಸುಮಾರು 2.43 ಲಕ್ಷ ರೂ.ಗಳ ಕಟ್ಟನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಕೆಳಗಿನಪೇಟೆ ಮನಾರುಲ್‌ ಇಸ್ಲಾಂ ಮದ್ರಸಾದ ಅಧ್ಯಾಪಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಅಧ್ಯಾಪಕ ಅಬ್ದುಲ್‌ ಮಜೀದ್‌ ಫೈಝಿ ಮೇ 28ರಂದು ಬೆಳಗ್ಗೆ ತರಗತಿ ಮುಗಿಸಿದ ಬಳಿಕ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುತ್ತಿದ್ದ ಸಂದರ್ಭ ಕಟ್ಟೊಂದು ಬಿದ್ದು ಸಿಕ್ಕಿತು. ಪರೀಕ್ಷಿಸಿದಾಗ ಅದರಲ್ಲಿ ನೋಟಿನ ಕಂತೆಗಳು ಪತ್ತೆಯಾದವು.

ಈ ಕುರಿತು ಮದ್ರಸಾ ಆಡಳಿತ ಸಮಿತಿಯವರ ಗಮನಕ್ಕೆ ತಂದಿದ್ದು, ಅವರು ಪರಿಶೀಲನೆ ನಡೆಸಿದಾಗ ಸ್ಥಳೀಯರಾದ ಶ್ರೀಪತಿ ಶ್ರೀಕಾಂತ್‌ ಭಟ್‌ ಅದರ ವಾರಸುದಾರರೆಂಬುದು ಪತ್ತೆಯಾಯಿತು ಅವರನ್ನು ಮದ್ರಸಾಕ್ಕೆ ಆಗಮಿಸಿ ಅಬ್ದುಲ್‌ ಮಜೀದ್‌ ಫೈಝಿ ಅವರಿಂದ ಹಣವನ್ನು ಪಡೆದುಕೊಂಡು ಕೃತಜ್ಞತೆ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next