Advertisement

18 ತ.ನಾ.ಶಾಸಕರು ಅನರ್ಹ:ಸ್ಪೀಕರ್‌ ಕ್ರಮ, ದಿನಕರನ್‌ಗೆ ಹಿನ್ನಡೆ

03:43 PM Sep 18, 2017 | Team Udayavani |

ಚೆನ್ನೈ : ಉಚ್ಚಾಟಿತ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್‌ ಅವರಿಗೆ ಒದಗಿರುವ ಭಾರೀ ಹಿನ್ನಡೆ ಎಂದು ತಿಳಿಯಲಾಗಿರುವ ವಿದ್ಯಮಾನದಲ್ಲಿ, ತಮಿಳು ನಾಡು ಅಸೆಂಬ್ಲಿ ಸ್ಪೀಕರ್‌ ಪಿ ಧನಪಾಲ್‌ ಅವರು ಇಂದು ಸೋಮವಾರ ದಿನಕರನ್‌ಗೆ ನಿಷ್ಠರಿರುವ 18 ಶಾಸಕರನ್ನು ಅನರ್ಹಗೊಳಿಸಿದರು. 

Advertisement

ಈ ಬೆಳವಣಿಗೆಯನ್ನು ದೃಢಪಡಿಸಿರುವ ಎಎನ್‌ಐ ಸುದ್ದಿ ಸಂಸ್ಥೆ, ಅಸೆಂಬ್ಲಿ ಸ್ಪೀಕರ್‌ ಧನಪಾಲ್‌ ಅವರಿಂದ ಅನರ್ಹತೆಯ ಶಿಸ್ತು ಕ್ರಮಕ್ಕೆ ಗುರಿಯಾಗಿರುವ 18 ಶಾಸಕರ ಹೆಸರನ್ನು ಪ್ರಕಟಿಸಿದೆ. 

ಈ ಹೆಸರುಗಳಲ್ಲಿ ಮುಖ್ಯವಾಗಿ ಕಾಣಿಸಿರುವ ಹೆಸರುಗಳೆಂದರೆ ತಂಗ ತಮಿಳ್‌ಸೆಲ್ವನ್‌, ಸೆಂಥಿಲ್‌ ಬಾಲಾಜಿ, ಪಿ. ವೆಟ್ರಿವೇಲ್‌ ಮತ್ತು ಕೆ ಮರಿಯಪ್ಪನ್‌. 

ದಿನಕರನ್‌ ಅವರನ್ನು ಬೆಂಬಲಿಸುತ್ತಿದ್ದ ಈ 18 ಶಾಸಕರು ಇಂದಿನಿಂದ ಜಾರಿಗೆ ಬರುವಂತೆ ಅನರ್ಹರಾಗಿರುತ್ತಾರೆ. ಇದು 1986ರ ತಮಿಳು ನಾಡು ಅಸೆಂಬ್ಲಿ ಸದಸ್ಯರ ಪಕ್ಷಾಂತರ ಕಾನೂನು ಪ್ರಕಾರ ಕೈಗೊಳ್ಳಲಾದ ಶಿಸ್ತು ಕ್ರಮವಾಗಿದೆ. 

ದಿನಕರನ್‌ಗೆ ನಿಷ್ಠರಿರುವ ಈ 18 ಮಂದಿ ಶಾಸಕರು ತಮಿಳು ನಾಡು ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ ಅವರ ಉಚ್ಚಾಟನೆಯನ್ನು ಆಗ್ರಹಿಸುತ್ತಲೇ ಬಂದಿದ್ದಾರೆ. 

Advertisement

ಸ್ಪೀಕರ್‌ ಅವರು ಈ ರೀತಿಯ ಅನರ್ಹತಾ ಶಿಸ್ತು ಕ್ರಮ ಕೈಗೊಳ್ಳಬಹುದೆಂಬ ಶಂಕೆಯಲ್ಲಿ ದಿನಕರನ್‌ ಈ ಮೊದಲೇ ಮದ್ರಾಸ್‌ ಹೈಕೋರ್ಟ್‌ ಮೆಟ್ಟಲೇರಿದ್ದರು.  ಸೆ.20ರ ತನಕ ವಿಶ್ವಾಸ ಮತ ನಡೆಯಕೂಡದೆಂದು ಮದ್ರಾಸ್‌ ಹೈಕೋರ್ಟ್‌ ಅಪ್ಪಣೆ ಕೊಡಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next