Advertisement

ಕನವಳ್ಳಿಯಲ್ಲಿ 17ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆ

06:36 PM Aug 03, 2023 | Team Udayavani |

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಸುರೇಶ ನಾಗಪ್ಪ ಕತ್ತೆಬೆನ್ನೂರು ಅವರಿಗೆ ಸೇರಿದ ಸರ್ವೇ ನಂಬರ್‌ 377/1ರ ಹೊಲದಲ್ಲಿ 17ನೇ ಶತಮಾನದ ಅಪರೂಪದ ಶಿಲಾ ಶಾಸನ ಪತ್ತೆಯಾಗಿದೆ.

Advertisement

ಶಾಸನ 6 ಸಾಲುಗಳ ಪಾಠ ಹೊಂದಿದ್ದು, 2 ಅಡಿ ಎತ್ತರ ಹಾಗೂ 1 ಅಡಿ ಅಗಲವಾಗಿದೆ. ನಗರದ ಗುದ್ಲೆಪ್ಪ ಹಳ್ಳಿಕೇರಿ
ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಮತ್ತು ಸಂಶೋಧಕ ಡಾ| ಶರಣಪ್ಪ ಬಸಪ್ಪ ಜಗ್ಗಲ ಅವರು ಈ ಶಾಸನ ಪತ್ತೆ ಮಾಡಿದ್ದಾರೆ.

ಕನವಳ್ಳಿ ಗ್ರಾಮದ ಕಮ್ಮಾರ ನಿಂಗಜ್ಜನ ಪುತ್ರನಾದ ಮಲಣ್ಣನು ಬೆರಿಂಗೆಯನ್ನು (ಬೆರಿಂಗೆ ಅಂದರೆ ರಂಧ್ರ ಕೊರೆಯುವ ವಸ್ತು) ಮಾಡಿ ಕೊಟ್ಟಿದ್ದಕ್ಕಾಗಿ ಈ ಗ್ರಾಮದ ಹೊಲ ಮಲಣ್ಣನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ವಂಶಪಾರಂಪರ್ಯ ಸೂರ್ಯ-ಚಂದ್ರರಿರುವವರೆಗೂ ಸೇರಿದ್ದು ಎಂಬ ಮಾಹಿತಿ ದಾಖಲಿಸುತ್ತದೆ. ಶಾಸನದ ಕೆಳ ಭಾಗದಲ್ಲಿ ಕಮ್ಮಾರಿಕೆಯ ವಸ್ತುಗಳನ್ನು ಕಾಣಬಹುದು.

ಈ ಶಾಸನ ಕನವಳ್ಳಿ ಗ್ರಾಮದ ಹೆಸರು ಮತ್ತು ಅಂದು ಆ ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಮಾರಿಕೆಯ ಮಹತ್ವವನ್ನು ಕೂಡಾ ದಾಖಲಿಸುತ್ತದೆ. ಶಾಸನದ ಪಠ್ಯವನ್ನು ಓದಿ ಅರ್ಥೈಸಿದ ಡಾ| ರವಿಕುಮಾರ ನವಲಗುಂದ ಶಾಸನ ವಿದ್ವಾಂಸರು, ಸರಕಾರಿ ಪದವಿ ಪೂರ್ವ ಕಾಲೇಜು, ಬನ್ನಿಕೋಡು-ಹರಿಹರ ಅವರಿಗೆ ಸಂಶೋಧಕರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಶಾಸನ ಪತ್ತೆ ಮಾಡಲು ಸುರೇಶ ಕತ್ತೆಬೆನ್ನೂರು, ಡಯಾನ ಕತ್ತೆಬೆನ್ನೂರು, ಯಲ್ಲಪ್ಪ ಬರಡಿ, ಡಾ|ಎಸ್‌. ಆರ್‌. ಕೋರಿಶೆಟ್ಟರ್‌, ಪ್ರೊ| ಶರಣಪ್ಪ ಕದರಮಂಡಲಗಿ, ಹಂಪಿ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಡಿ.ವೀರೇಶ ಇತರರು ಸಹಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next