Advertisement

15,000 ಗಿಡ ನೆಡುವ ಶಿಕ್ಷೆ

01:20 AM Feb 08, 2019 | Team Udayavani |

ಹೊಸದಿಲ್ಲಿ: 2ಜಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ನೀಡಿದ್ದ ಗಡುವನ್ನು ಮೀರಿದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ಮೂರು ಕಂಪೆನಿಗಳಿಗೆ ಒಟ್ಟು, 15,000 ಗಿಡ ನೆಡುವಂತೆ ದಿಲ್ಲಿ ಹೈಕೋರ್ಟ್‌ ವಿಶಿಷ್ಟ ಶಿಕ್ಷೆ ನೀಡಿದೆ. 

Advertisement

2ಜಿ ಹಗರಣದಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ 3 ಕಂಪೆನಿಗಳ ಖುಲಾಸೆ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಹೈಕೋರ್ಟ್‌ ಮೆಟ್ಟಿಲೇರಿತ್ತು. ಇದಕ್ಕೆ ನಿರ್ದಿಷ್ಟ ಗಡುವಿನೊಳಗೆ ಉತ್ತರಿಸುವಂತೆ ನ್ಯಾಯಾ ಲಯ ಸೂಚಿಸಿದ್ದರೂ, ಆರೋಪಿಗಳು ಪ್ರತಿಕ್ರಿಯಿಸಿರಲಿಲ್ಲ. ಕೊನೆಯ‌ ಅವಕಾಶವನ್ನೂ ಬಳಸದ ಆರೋಪಿಗಳು, ಹೆಚ್ಚು ಕಾಲಾವಕಾಶ ಕೋರಿದ್ದರಿಂದ ಅಸಮಾಧಾನಗೊಂಡ ನ್ಯಾ. ನಜ್ಮಿ ವಾಜಿರಿ, ಇವರಿಗೆ ತಲಾ 3 ಸಾವಿರ ಗಿಡ ನೆಡುವ ಶಿಕ್ಷೆ ಪ್ರಕಟಿಸಿ, ವಿಚಾರಣೆಯನ್ನು ಮಾ. 26ಕ್ಕೆ ಮುಂದೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next