Advertisement

ಕೊಕ್ಕರ್ಣೆ ಸರಕಾರಿ ಹಿ.ಪ್ರಾ. ಶಾಲೆಗೆ ಅರಮನೆಯವರ ಆಶ್ರಯ

01:11 PM Nov 09, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1860 ಶಾಲೆ ಆರಂಭ
ಸ್ವತಂತ್ರ ಪೂರ್ವದಲ್ಲಿ ಸ್ಥಾಪಿತವಾದ ಶಾಲೆ

ಬ್ರಹ್ಮಾವರ: ಸಾಹಿತ್ಯ ಆಧಾರಿತ ಇತಿಹಾಸದ ಮಾಹಿತಿ ಪ್ರಕಾರ 1913-14ರ ಕಾಲದಲ್ಲಿ ಸೂರಾಲು ಕೊಕ್ಕರ್ಣೆ ಅರಮನೆಯ ನಾಭಿರಾಜರು ಜೈನಬಂಧು ಎಂಬ ಹಸ್ತಪತ್ರಿಕೆಯನ್ನು ತಯಾರಿಸುತ್ತಿದ್ದರು. ಅದಕ್ಕಾಗಿ ಅವರು ಅಕ್ಷರಾಭ್ಯಾಸ ಬಲ್ಲ ತಂಡವನ್ನು ತಯಾರಿಸಿಕೊಳ್ಳಬೇಕಿತ್ತು. ಆದ್ದರಿಂದ ಅವರು ಐ ಗಳನ್ನು ಕರೆಯಿಸಿ ವಿದ್ಯಾಭ್ಯಾಸವನ್ನು ನೀಡುವ ಕಾಯಕಕ್ಕೆ ಕೈ ಹಾಕಿದರು. ಈ ಗುರುಗಳಿಗೆ ಅರಮನೆಯ ವತಿಯಿಂದ ಪಡಿಯನ್ನು (ಸಂಭಾವನೆ) ನೀಡುವ ವ್ಯವಸ್ಥೆಯನ್ನು ರೂಪಿಸಿದ್ದರು. ಮುಂದೆ ಇದೇ ಕಾರ್ಯಕ್ಕಾಗಿ ತಮ್ಮ ಜಾಗವನ್ನು ಕೂಡ ದಾನವಾಗಿ ನೀಡಿದ್ದರು. ಕಾಲ ಕ್ರಮೇಣ ಬ್ರಿಟಿಷರು ಈ ಶಿಕ್ಷಣ ವ್ಯವಸ್ಥೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಸ್ವಾತಂತ್ರ್ಯಾ ಅನಂತರ ಸರಕಾರಿ ಶಾಲೆಯಾಗಿ ಅಸ್ತಿತ್ವಕ್ಕೆ ಬಂದಿದೆ ಎನ್ನುವ ಸಾಹಿತಿಕ ದಾಖಲೆಯಾಗಿದೆ.

ನಿಖರವಾದ ಮಾಹಿತಿ ಇಲ್ಲ
ಕೊಕ್ಕರ್ಣೆ ಸರಕಾರಿ ಶಾಲೆಯ ಹುಟ್ಟು ಯಾವಾಗ ಎನ್ನುವ ನಿಖರವಾದ ಮಾಹಿತಿ ದೊರೆತಿಲ್ಲ. ಆದರೆ ಸ್ವತಂತ್ರ ಪೂರ್ವದಿಂದಲೇ ಹಂತ ಹಂತವಾಗಿ ಬೆಳೆದು ಬಂದ ವಿದ್ಯಾ ದೇಗುಲವಾಗಿದೆ. ಅಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ, ಶ್ರೇಷ್ಠ ಗುರು ಪರಂಪರೆ ಹೊಂದಿದ ಶಾಲೆ ಎನ್ನುವ ಕೀರ್ತಿ ಇದಕ್ಕಿದೆ. 1860ರ ಆಸುಪಾಸಿನಲ್ಲೇ ಇಲ್ಲಿ ಶಿಕ್ಷಣ ಕೇಂದ್ರ ಪ್ರಾರಂಭಗೊಂಡಿದೆ ಎನ್ನಲಾಗಿದೆ. ಮೊದಲ ಮುಖ್ಯೋಪಾಧ್ಯಾಯರ ಕುರಿತು ಸರಿಯಾದ ದಾಖಲೆಯಿಲ್ಲ. ಹಿರಿಯರ ಪ್ರಕಾರ ರಾಮರಾಯ ಕಿಣಿ ಅವರು ಪ್ರಾರಂಭದ ದಿನಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

ವಿದ್ಯಾರ್ಥಿಗಳ ಸಂಖ್ಯೆ
ಪ್ರಸ್ತುತ ಶಾಲೆಯಲ್ಲಿ 121 ವಿದ್ಯಾರ್ಥಿಗಳಿದ್ದು, 3 ಖಾಯಂ ಶಿಕ್ಷಕರು, ಮೂವರು ಸರಕಾರದಿಂದ ನಿಯೋಜಿಸಿದ ಅತಿಥಿ ಶಿಕ್ಷಕರು ಹಾಗೂ ಒಬ್ಬರು ಧರ್ಮಸ್ಥಳದ ವತಿಯಿಂದ ಜ್ಞಾನದೀಪ ಯೋಜನೆಯಡಿ ನೀಡಿದ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಪ್ರಶಸ್ತಿಗಳು
ಸ್ವಚ್ಛತೆಗೆ ಸಂಬಂಧ ಪಟ್ಟಂತೆ 2017-18ನೇ ಸಾಲಿನಲ್ಲಿ ರಾಜ್ಯ ಮಟ್ಟದ ಸ್ವತ್ಛ ವಿದ್ಯಾಲಯ ಪ್ರಶಸ್ತಿ, ಪರಿಸರಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ಹಾಗೂ ಶಾಲಾ ಕೈ ತೋಟ ನಿರ್ವಹಣೆಗೆ 2017-18ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಕಿತ್ತಳೆ ಶಾಲೆ ಪ್ರಶಸ್ತಿ, 2018-19ರಲ್ಲಿ ಪರಿಸರ ಮಿತ್ರ ಹಳದಿ ಶಾಲೆ ಪ್ರಶಸ್ತಿ ಲಭಿಸಿದೆ.

ಸಾಧಕ ಶಿಕ್ಷಕರು
2000ರಲ್ಲಿ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾ ಯರಾಗಿದ್ದ ಎನ್‌. ಕರುಣಾಕರ ಶೆಟ್ಟಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ ಹಾಗೂ ಇವರು ನುಕ್ಕೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ 2005-06ರಲ್ಲಿ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಪ್ರಭಾರ ಮುಖ್ಯ ಶಿಕ್ಷಕರಾಗಿರುವ ಭಾಸ್ಕರ್‌ ಪೂಜಾರಿ ಅವರಿಗೆ ಈ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ದೊರೆತಿದೆ

ಶಾಲಾ ಸಾಧನೆ
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಜತೆಯಲ್ಲಿ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಸಹಪಠ್ಯ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿರುತ್ತಾರೆ. ಯೋಗ, ಯಕ್ಷಗಾನ ತರಗತಿಗಳನ್ನು ನಡೆಸಲಾಗುತ್ತಿದೆ.

ಶತಮಾ ನೋತ್ಸವ ವನ್ನು ಪೂರೈಸಿದ ಈ ಶಾಲೆ ಇಷ್ಟು ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ಈ ಶಾಲೆಯ ಹಳೆ ವಿದ್ಯಾರ್ಥಿಗಳ, ದಾನಿಗಳ, ಎಸ್‌.ಡಿ.ಎಂ.ಸಿ.ಯವರ, ಊರಿನವರ ಹಾಗೂ ಕರ್ತವ್ಯ ನಿರ್ವಹಿಸಿದ ಶಿಕ್ಷಕ ವೃಂದದವರ ಶ್ರಮ ಅಮೂಲ್ಯವಾಗಿದೆ. ಇನ್ನೂ ಈ ಶಾಲೆ ಉನ್ನತಿಯ ಹಾದಿಯಲ್ಲಿ ಸಾಗಲಿ ಎನ್ನುವುದೇ ನಮ್ಮ ಆಶಯ.
-ಭಾಸ್ಕರ್‌ ಪೂಜಾರಿ, ಪ್ರಭಾರ ಮುಖ್ಯ ಶಿಕ್ಷಕ

ನಾವು ಕಲಿಯುವಾಗ ಶಿಕ್ಷಕರು ಅರ್ಪಣಾ ಭಾವದಿಂದ ಶಿಕ್ಷಣ ನೀಡಿದರ ಫಲವಾಗಿ ನಮ್ಮಂತ ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು.
-ಡಾ| ಜಿ.ಪಿ. ಶೆಟ್ಟಿ, ಚೇರ್‌ವೆುನ್‌, ಮಲ್ಟಿಪ್ಲೆಕ್ಸ್‌ ಗ್ರೂಪ್ಸ್‌ ಆಫ್‌ ಕಂಪೆನಿ, ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next