Advertisement

ಮುಂಬೈನಿಂದ ವಿಜಯಪುರಕ್ಕೆ ಮತ್ತೆ 147 ಜ‌ನ ವಾಪಸ್: ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್

05:56 PM Jun 03, 2020 | keerthan |

ವಿಜಯಪುರ: ದುಡಿಮೆ ಅರಸಿ ಮಹಾರಾಷ್ಟ್ರ ರಾಜ್ಯದಲ್ಲಿ ನೆಲೆಸಿದ್ದ 147 ಕಾರ್ಮಿಕರ ಮತ್ತೊಂದು ತಂಡ ಬುಧವಾರ ಮುಂಬೈ-ಗದಗ ರೈಲು ಮೂಲಕ ನಗರಕ್ಕೆ ಆಗಮಿಸಿದೆ.

Advertisement

ಬೆಳಿಗ್ಗೆ 7-30 ಮುಂಬೈ-ಗದಗ ರೈಲು ನಗರಕ್ಕೆ ಆಗಮಿಸಿದ್ದು, ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಎಲ್ಲ 147 ಜನರನ್ನು ಜಿಲ್ಲಾಡಳಿತ ಸಾಂಸ್ಥಿಕ ಕ್ವಾರಂಟೈನ್ ನಿಗಾಕ್ಕೆ ಕಳಿಸಿದೆ.

ನಿನ್ನೆ ಮುಂಬೈ ರೈಲು ಮೂಲಕ ನಗರಕ್ಕೆ ಆಗಮಿಸಿದ 210 ಜನರನ್ನು ಪ್ರತ್ಯೇಕ ಬಸ್ ಗಳಲ್ಲಿ ಆಯಾ ತಾಲೂಕಗಳ ಶಾಲೆ, ವಸತಿ ಶಾಲೆ, ಹಾಸ್ಟೆಲ್ ಗಳಲ್ಲಿ ತೆರೆಯಲಾಗಿರುವ ಸಾಂಸ್ಥಿಕ ಕ್ವಾರಂಟೈನ್ ಗೆ ಕಳಿಸಲಾಗಿದೆ.

ಮುಂಬೈನಿಂದ ಇಂದು ಆಗಮಿಸಿದವರನ್ನೂ ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿದ ಬಳಿಕ ಅಧಿಕಾತಿಗಳು ಸಾರಿಗೆ ಬಸ್ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಿಗೆ‌ ಕಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next