Advertisement

ಸಂತ್ರಸ್ತರಿಗೆ 1,300 ಕೋ. ರೂ. ಪರಿಹಾರ ಪ್ಯಾಕೇಜ್‌: ವಾಡೆಟ್ಟಿವಾರ್‌

09:03 AM Jun 19, 2020 | Suhan S |

‌ಮುಂಬಯಿ, ಜೂ. 17: ನಿಸರ್ಗ ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸುಮಾರು 1,300 ಕೋಟಿ ರೋ,ಗಳ ಪರಿಹಾರ ಪ್ಯಾಕೇಜ್‌ ಘೋಷಿಸಲು ಎಂದು ರಾಜ್ಯ ಸರಕಾರ ಅಂದಾಜಿಸಿದೆ ಎಂದು ಪರಿಹಾರ ಮತ್ತು ಪುನರ್ವ ಸತಿ ಸಚಿವ ವಿಜಯ್‌ ವಾಡೆಟ್ಟಿವಾರ್‌ ಹೇಳಿದ್ದಾರೆ.

Advertisement

ಜೂನ್‌ 4ರಂದು ಚಂಡಮಾರುತದಿಂದ ರಾಯಗಢ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿರುವುದಲ್ಲದೆ, ಪಕ್ಕದ ರತ್ನಾಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಲ್ಲಿ ಹಾನಿಯನ್ನುಂಟುಮಾಡಿತ್ತು. ಹಾನಿ ಮೌಲ್ಯ ಮಾಪನ ಕುರಿತು ಪರಿಶೀ ಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್‌ ಪವಾರ್‌ ಅವರೊಂದಿಗೆ ಈ ಪ್ರದೇಶದಲ್ಲಿ ಚಂಡಮಾರುತ ಪೀಡಿತ ಕುಟುಂಬಗಳಿಗೆ ಶೀಘ್ರವಾಗಿ ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದರು. ವೀಡಿಯೋ ಕಾನ್ಫರೆನ್ಸ್‌ನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದ ವಾಡೆಟ್ಟಿವಾರ್‌, ರಾಜ್ಯ ಸರಕಾರವು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಒಟ್ಟು ಹಾನಿಯನ್ನು ನಿರ್ಣಯಿಸುತ್ತಿದೆ ಎಂದು ಹೇಳಿದರು.

ಪರಿಹಾರದ ಮೊತ್ತವು 1,200 ಕೋ. ರೂ. ಗಳಿಂದ 1,300 ಕೋ. ರೂ. ಗಳೆಂದು ನಾವು ಅಂದಾಜು ಮಾಡಿದ್ದೇವೆ. ಒಟ್ಟಾರೆ ಹಾನಿ ಮೌಲ್ಯಮಾಪನ ಇನ್ನೂ ನಡೆಯುತ್ತಿದೆ. ಪರಿಹಾರ ಪ್ಯಾಕೇಜ್‌ ಮೊತ್ತವನ್ನು ಈ ಹಿಂದೆ ಘೋಷಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚಿಸಲಾಗಿದೆ ಎಂದರು. ಚಂಡಮಾರುತ ಪೀಡಿತ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರವನ್ನು ನೀಡುವ ಸರಕಾರದ ನಿರ್ಣಯವನ್ನು (ಜಿಆರ್‌) ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದರು. ಪರಿಹಾರದ ವಿತರಣೆಯನ್ನು ಪ್ರಾರಂಭಿಸಲು ಇಲಾಖೆ ಕೊಂಕಣ ವಿಭಾಗೀಯ ಆಯುಕ್ತರಿಗೆ ಹೆಚ್ಚುವರಿ 70,370 ಕೋ. ರೂ. ಗಳನ್ನು ಮಂಜೂರು ಮಾಡಿದೆ ಎಂದು ವಾಡೆಟ್ಟಿವಾರ್‌ ಹೇಳಿದರು.

ರಾಜ್ಯವು ಈಗಾಗಲೇ ರಾಯಗಢಕ್ಕೆ 100 ಕೋ. ರೂ. ಮತ್ತು ರತ್ನಾಗಿರಿಗೆ 75 ಕೋ. ರೂ. ಮತ್ತು ಸಿಂಧುದುರ್ಗಕ್ಕೆ 25 ಕೋ. ರೂ. ಗಳನ್ನು ಬಿಡುಗಡೆ ಮಾಡಿದೆ. ಚಂಡಮಾರುತದಿಂದ ಹಾನಿಗೊಳಗಾದ 1,470 ಸರಕಾರಿ ಶಾಲೆಗಳಿಗೆ 24 ಕೋ.ರೂ. ಗಳನ್ನು ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದರು.  ಈ ಪ್ರದೇಶದ ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರ 2 ಲಕ್ಷ ರೂ.ಗಳನ್ನು ನೀಡಲಿದೆ ಎಂದು ವಾಡೆಟ್ಟಿವಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next