Advertisement

ಮಂಕಿಯಲ್ಲಿ 13 ಸೆಂ.ಮೀ. ಮಳೆ

11:40 PM Aug 30, 2019 | Team Udayavani |

ಬೆಂಗಳೂರು/ಮಂಗಳೂರು: ಶುಕ್ರವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಹಲವೆಡೆ, ದಕ್ಷಿಣ ಒಳನಾಡಿನ ಕೆಲ ವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಯಿತು. ಮಂಕಿಯಲ್ಲಿ ರಾಜ್ಯದಲ್ಲಿ ಯೇ ಅಧಿಕವೆನಿಸಿದ 13 ಸೆಂ. ಮೀ.ಮಳೆ ಸುರಿಯಿತು.

Advertisement

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಂಕಿ-ಮಾವಿನಕಟ್ಟಾ, ಗುಳದಕೇರಿ, ಸಾರಸ್ವತಕೇರಿ, ದಾಸನಮಕ್ಕಿ, ಕಾಸರಕೋಡ ಹೊಸಪಟ್ಟಣ, ನಾಜಗಾರ ಮೊದಲಾದ ತಗ್ಗು ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಳೆ ಸುರಿದು, ಜನಜೀವನ ಅಸ್ತವ್ಯಸ್ತವಾಗಿದೆ. ಗುಳದಕೇರಿಯಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. 30 ಮನೆಗಳಿಗೆ ನೀರು ನುಗ್ಗಿದ್ದು, ಈ ಕುಟುಂಬದ 50 ಜನರನ್ನು ಸ್ಥಳಾಂತರಿಸಲಾಗಿದೆ.

ಇದೇ ಅವಧಿಯಲ್ಲಿ ಗೋಕರ್ಣದಲ್ಲಿ 11 ಸೆಂ.ಮೀ., ಅಂಕೋಲಾದಲ್ಲಿ 9 ಸೆಂ.ಮೀ., ಕೋಟಾ, ಕುಂದಾಪುರಗಳಲ್ಲಿ ತಲಾ 8 ಸೆಂ.ಮೀ., ಸುಬ್ರಹ್ಮಣ್ಯ, ಕಾರ್ಕಳ, ಸಿದ್ದಾಪುರ, ಹೊನ್ನಾವರಗಳಲ್ಲಿ ತಲಾ 7 ಸೆಂ.ಮೀ. ಮಳೆಯಾದ ವರದಿಯಾಗಿದೆ. ಭಾನುವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next