Advertisement

ಕೇರಳ ಮಳೆಗೆ 39 ಬಲಿ , 1.18 ಲಕ್ಷ ಜನರು ಪರಿಹಾರ ಶಿಬಿರಗಳಲ್ಲಿ

03:26 PM Jul 20, 2018 | Team Udayavani |

ತಿರುವನಂತಪುರ : ಕೇರಳದ ಬಹುತೇಕ ಭಾಗಗಳಲ್ಲಿ ಜಡಿ ಮಳೆಯಾಗುತ್ತಿದ್ದು ಸುಮಾರು 1.18 ಲಕ್ಷ ಮಂದಿ ರಾಜ್ಯಾದ್ಯಂತದ ನಿರಾಶ್ರಿತರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ರಾಜ್ಯದ ವಿವಿಧೆಡೆಗಳಲ್ಲಿ ವ್ಯತ್ಯಸ್ತ ತೀವ್ರತೆಯಲ್ಲಿ ಜಡಿಮಳೆಯಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

ಜುಲೈ 9ರಿಂದ ಆರಂಭವಾಗಿರುವ ಎರಡನೇ ಹಂತದ ಜಡಿಮಳೆಗೆ ಈ ತನಕ 39 ಜೀವಗಳು ಬಲಿಯಾಗಿವೆ. ಮುಂಗಾರು ಮಳೆ ಕೇರಳಕ್ಕೆ ಕಳೆದ ಮೇ 29ರಂದೇ ಅಪ್ಪಳಿಸಿತ್ತು. 

ಪ್ರಕೃತ 50,836 ಮಂದಿ ಅಲಪ್ಪುಳದಲ್ಲಿನ 212 ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ. ನೆರೆಯ ಕೋಟ್ಟಯಂನ 164 ಶಿಬಿರಗಳಲ್ಲಿ 37,657 ಮಂದಿ ಆಸರೆ ಪಡೆದಿದ್ದಾರೆ. ಮುಂಗಾರು ಮಳೆಯ ಆರ್ಭಟಕ್ಕೆ ಈ ಎರಡು ಜಿಲ್ಲೆಗಳು ತೀವ್ರವಾಗಿ ತತ್ತರಿಸಿದ್ದು ಇಲ್ಲಿ ಅತ್ಯಧಿಕ ನಾಶ ನಷ್ಟ, ಜೀವಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next