Advertisement

ಅಫ್ಘಾನ್‌ನಿಂದ ಭಾರತಕ್ಕೆ ಮರಳಿದ 110 ಹಿಂದೂ, ಸಿಖ್ಖರು

08:42 PM Dec 10, 2021 | Team Udayavani |

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಆರಂಭವಾದ ನಂತರ ಅತಂತ್ರರಾಗಿದ್ದ 110 ಹಿಂದೂಗಳು ಮತ್ತು ಸಿಖ್ಖರು ಶುಕ್ರವಾರ ದೆಹಲಿಗೆ ಆಗಮಿಸಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುರ್ನಾಮ್‌ ಸಿಂಗ್‌, ಇನ್ನೂ ನೂರಾರು ಹಿಂದೂಗಳು, ಸಿಖVರು ಅಫ್ಘಾನಿಸ್ತಾನದಲ್ಲೇ ಉಳಿದುಕೊಳ್ಳಬೇಕಾದ ಸ್ಥಿತಿಯಿದೆ. ಮುಂದಿನ ವಿಮಾನದಲ್ಲಿ ಇವರಲ್ಲಿ ಬಹುತೇಕರು ದೇಶಕ್ಕೆ ಮರಳಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇಂಡಿಯನ್‌ ವರ್ಲ್ಡ್ ಫೋರಂನ ಮುಖ್ಯಸ್ಥ ಪುನೀತ್‌ ಶಿಂಗ್‌ ಚಾಂಧೋಕ್‌ ಮಾತನಾಡಿ, ಅಫ್ಘಾನಿಸ್ತಾನದ ಐತಿಹಾಸಿಕ ಗುರುದ್ವಾರಗಳಿಂದ ಗುರು ಗ್ರಂಥ ಸಾಹಿಬ್‌ ಅನ್ನು, ಹಾಗೆಯೇ ಕಾಬೂಲ್‌ನ ಆಸಮಾಯಿ ಮಂದಿರದಿಂದ ಮಹಾಭಾರತ, ರಾಮಾಯಣ, ಭಗವದ್ಗೀತೆಯನ್ನು ಭಾರತಕ್ಕೆ ತರಲಾಗಿದೆ. ಅದನ್ನು ಭಾರತದ ನಿರ್ದಿಷ್ಟ ಗುರುದ್ವಾರ, ದೇವಸ್ಥಾನಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಕೇಕ್‌ ತಯಾರಿಕೆಗೆ ಬರೋಬ್ಬರಿ 48 ಗಂಟೆ ಬೇಕಾಗಿತ್ತಂತೆ!

Advertisement

Udayavani is now on Telegram. Click here to join our channel and stay updated with the latest news.

Next