Advertisement

ರಾಜಸ್ಥಾನದಲ್ಲಿ ಭೀಕರ ಅಪಘಾತ;11 ಯಾತ್ರಿಕರ ದುರ್ಮರಣ 

10:46 AM Jan 03, 2018 | Team Udayavani |

ಸೀಕಾರ್‌: ಇಲ್ಲಿನ ಬಿಕಾನೇರ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 11 ರಲ್ಲಿ ಬುಧವಾರ ಯಾತ್ರಿಕರಿದ್ದ ಬಸ್ಸೊಂದು ಟ್ರಕ್‌ಗೆ ಢಿಕ್ಕಿಯಾಗಿ  ಸಂಭವಿಸಿದ ಭೀಕರ ಅವಘಡದಲ್ಲಿ 11 ಮಂದಿ ದಾರುಣವಾಗಿ  ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ  ಗಾಯಗೊಂಡಿದ್ದಾರೆ. 

Advertisement

ಯಾತ್ರಿಕರಿಂದ ತುಂಬಿದ್ದ ರಾಜಸ್ಥಾನ ಲೋಕ ಪರಿವಾಹನ್‌ ಹೆಸರಿನ ಬಸ್‌ ಓವರ್‌ ಟೇಕ್‌ ಮಾಡುವ ವೇಳೆ  ಲಾರಿಗೆ ಢಿಕ್ಕಿಯಾಗಿದೆ. ದಟ್ಟ ಮಂಜು ಇದ್ದ ಕಾರಣ ಅವಘಡ ಸಂಭಿವಿಸಿದೆ ಎಂದು ವರದಿಯಾಗಿದೆ. 

ಗಾಯಾಳುಗಳನ್ನು ರಕ್ಷಣಾ ಕಾರ್ಯ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ . 
 

Advertisement

Udayavani is now on Telegram. Click here to join our channel and stay updated with the latest news.

Next