Advertisement

ರಾಜ್ಯದಲ್ಲಿ 1ಸಾವಿರ ಸಾವು ವರದಿಯಾಗಿಲ್ಲ: ಫ‌ಡ್ನವೀಸ್‌

05:44 PM Jun 27, 2020 | Suhan S |

ಮುಂಬಯಿ, ಜೂ. 26: ಮಹಾರಾಷ್ಟ್ರ ಸರಕಾರ ಈವರೆಗೆ ಸುಮಾರು 1,000 ಕೋವಿಡ್ ಸಾವುಗಳನ್ನು ವರದಿ ಮಾಡಿಲ್ಲ ಎಂದು ಬಿಜೆಪಿ ನಾಯಕ ದೇವೇಂದ್ರ ಫ‌ಡ್ನವೀಸ್‌ ಆಪಾದಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ಅಂತಹ ಸಾವುಗಳನ್ನು ವರದಿ ಮಾಡದಿರುವ ಬಗ್ಗೆ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ.

Advertisement

ಈ ಮೊದಲು ಜೂ. 15ರಂದು ಸಿಎಂ ಅವರಿಗೆ ಪತ್ರ ಬರೆದ ಒಂದು ದಿನದ ಬಳಿಕ ಮುಂಬಯಿಯಲ್ಲಿ 950 ಕೋವಿಡ್‌ ಸಾವುಗಳನ್ನು ವರದಿ ಮಾಡಿದೆ ಎಂದು ಫ‌ಡ್ನವೀಸ್‌ ಹೇಳಿದ್ದಾರೆ. ಆದರೆ ಹೊಸ ಪತ್ರದಲ್ಲಿ ಅವರು ರಾಜ್ಯದಲ್ಲಿ ಇಂತಹ ಸುಮಾರು 1,000 ಸಾವುಗಳನ್ನು ಸರಕಾರ ವರದಿ ಮಾಡಿಲ್ಲ ಎಂದು ಆಪಾದಿಸಿದ್ದಾರೆ. ಈ ನಡೆ ರಾಜ್ಯ ಸರಕಾರದ ತಪ್ಪು ತಂತ್ರವಾಗಿದೆ ಎಂದಿದ್ದಾರೆ.

ಫ‌ಡ್ನವೀಸ್‌ ಅವರು ಮಾತನಾಡಿ, ಕಳೆದ ಮೂರು ತಿಂಗಳಲ್ಲಿ 1,000 ಜನರ ಸಾವು ವರದಿಯಾಗಿಲ್ಲ ಎಂದಿದ್ದಾರೆ. ಕೋವಿಡ್ ಸೊಂಕಿನಿಂದ ಸಂಭವಿಸುವ ಸಾವು 72 ಗಂಟೆಗಳ ಒಳಗೆ ವರದಿಯಾಗಬೇಕು. ಆದರೆ ಅದು ಆಗುತ್ತಿಲ್ಲ. ಈ ಕುರಿತು ಸರಕಾರ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next